ಆಹಾರ ಧಾನ್ಯಗಳ ಮೇಲಿನ ಜಿಎಸ್ ಟಿ ವಿರೋಧಿಸಿ ಕರೆದ ಬಂದ್ ಗೆ ಅಭೂತಪೂರ್ವ ಸಹಕಾರ: ಕೋಗುಂಡಿ ಬಕ್ಕೇಶಪ್ಪ

ಸುದ್ದಿ360, ದಾವಣಗೆರೆ, ಜು.16: ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ 5% ಜಿ ಎಸ್ ಟಿ ವಿರೋಧಿಸಿ ನಡೆಸಿದ ಬಂದ್ ಗೆ ಅಭೂತ ಪೂರ್ವ ಸಹಕಾರ ನೀಡಿದ  ಎಲ್ಲರಿಗೂ ಜಿಲ್ಲಾ ಅಕ್ಕಿಗಿರಣಿದಾರರ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ ಧನ್ಯವಾದ ತಿಳಿಸಿದ್ದಾರೆ.

ಜೊತೆಗೆ ಇತರ ಆಹಾರ ಧಾನ್ಯಗಳ ವರ್ತಕರು ವಾಣಿಜ್ಯ ಸಂಸ್ಥೆಗಳು ಚೌಕಿಪೇಟೆ ವರ್ತಕರು ದಲಾಲರು ಮೆಕ್ಕೆಜೋಳದ ವರ್ತಕರು ನಮ್ಮೊಂದಿಗೆ ಸಹಕರಿಸುವ ಮೂಲಕ ದಾವಣಗೆರೆ ಇತಿಹಾಸದಲ್ಲೇ ಅಭೂತ ಪೂರ್ವವಾಗಿ ಬಂದ್ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಬೆಂಗಳೂರಿನಲ್ಲಿ ಸಭೆ ಕರೆಯುತ್ತಾರೆ ಆ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಮಗೆ ಮುಂಚಿತವಾಗಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!