ಭಾನಾಪೂರ ಬಳಿ ನಡೆದ ಅಪಘಾತದಲ್ಲಿ ತಬ್ಬಲಿಗಳಾದ ಮೂವರು ಮಕ್ಕಳು

ಸುದ್ದಿ360 ಕೊಪ್ಪಳ ಜು.25: ಕಳೆದ ವರ್ಷ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳು, ಶನಿವಾರ ತಡರಾತ್ರಿ ನಡೆದ ಅಪಘಾತದಲ್ಲಿ ತಾಯಿ ಪಾರವ್ವನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.

ಅಪಘಾತದಲ್ಲಿ ತಾಯಿ ಪಾರವ್ವ ಮೃತ ಪಟ್ಟರೇ, ಪುಟ್ಟರಾಜ್, ಭೂಮಿಕಾ ಹಾಗೂ ಬಸವರಾಜಗೆ ಗಾಯವಾಗಿದೆ.

ಪಾರವ್ವ ಪತಿ ಬೀರಪ್ಪ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪರಿಣಾಮ ಬೀರಪ್ಪ, ಪಾರವ್ವ ದಂಪತಿಗಳ ಮಕ್ಕಳಾದ ಬಸವರಾಜ್, ಪುಟ್ಟರಾಜ, ಭೂಮಿಕಾ ತಂದೆ ತಾಯಿಗಳಿಲ್ಲದೆ ಅನಾಥರಾಗಿವುದು ಎಂಥಹವರಿಗೂ ಮನ ಮಿಡಿಯುವಂತೆ ಮಾಡಿದೆ. ಅಪಘಾತದಲ್ಲಿ ಗಾಯಗೊಂಡಿರುವ  ಈ ಮಕ್ಕಳು ಸದ್ಯ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾಥ ಮಕ್ಕಳ ರೋಧನೆ ಮುಗಿಲು ಮುಟ್ಟುವಂತಿದೆ.

ಘಟನೆಯಲ್ಲಿ ತಾಯಿ,ಹಾಗೂ ವರ್ಷದ ಹಿಂದೆ ತಂದೆ ಕಳೆದುಕೊಂಡು ಅನಾಥರಾದ ಮಕ್ಕಳ ರೋಧನೆ ಮುಗಿಲು ಮುಟ್ಟುವಂತಿದೆ.

ಸ್ಕಾರ್ಪಿಯೋ ಲಾರಿಗೆ ಗುದ್ದಿದ ಪರಿಣಾಮ ಬಿನ್ನಾಳ ಗ್ರಾಮದ ಐವರು ಮೃತಪಟ್ಟಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!