ಸಾರ್ವಜನಿಕ ಶಿಕ್ಷಣ ಉಳಿಸಿ ದಿನದ ಪ್ರಯುಕ್ತ ಎಐಡಿಎಸ್‌ಓದಿಂದ ಪ್ರತಿಭಟನೆ

ಪ್ರಶ್ನಿಸಿದವರನ್ನು ಹತ್ತಿಕ್ಕುತ್ತಿರುವ ಸರ್ಕಾರ: ಎ.ಬಿ. ರಾಮಚಂದ್ರಪ್ಪ ಆರೋಪ

ಸುದ್ದಿ360 ದಾವಣಗೆರೆ, ಜು.29: ಸರ್ಕಾರದ ನಿಲುವು ಪ್ರಶ್ನಿಸಿದವರನ್ನು ಹತ್ತಿಕ್ಕುವುದು ಮತ್ತು ದೇಶದ್ರೋಹ ಪಟ್ಟ ಕಟ್ಟುವ ಏಕಸ್ವಾಮ್ಯ ಧೋರಣೆ ಸರ್ಕಾರದ್ದಾಗಿದೆ ಎಂದು ಪ್ರೊ. ಎ.ಬಿ. ರಾಮಚಂದ್ರಪ್ಪ  ದೂರಿದರು.

ಅವರು ನಗರದ ಜಯದೇವ ವೃತ್ತದಲ್ಲಿ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಒತ್ತಾಯ ಪೂರ್ವಕ ಎನ್‌ಇಪಿ ಹೇರಿಕೆ, ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ಕ್ರಮವನ್ನು ಖಂಡಿಸಿ ಎಐಡಿಎಸ್ಓ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಸ್ಮರಣ ದಿನದ ಅಂಗವಾಗಿ ರಾಜ್ಯವ್ಯಾಪಿ ಸಾರ್ವಜನಿಕ ಶಿಕ್ಷಣ ಉಳಿಸಿ ದಿನದ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರೊ. ರಾಮಚಂದ್ರಪ್ಪ ಮಾತನಾಡುತ್ತಾ, ಶಿಕ್ಷಣವನ್ನು ಕೆೇವಲ ಮೇಲ್ಜಾತಿಯ ಶ್ರೀಮಂತರಿಗೆ ಸಿಗುವಂತೆ ಮಾಡುವುದು ಹಾಗೂ ಸಾಮಾನ್ಯ ಜನರಿಂದ ಅಕ್ಷರವನ್ನು ಕಸಿಯುವುದು ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶವಾಗಿದೆ. ಉನ್ನತ ಶಿಕ್ಷಣದ 70% ಕಾಲೆೇಜುಗಳು ಖಾಸಗಿಕರಣವಾಗಿವೆ.  ಶಿಕ್ಷಣ ಸಾರ್ವತ್ರಿಕವಾಗಬೇಕು. ಹುಟ್ಟುವ ಪ್ರತಿ ಮಗುವಿಗೂ ಶಿಕ್ಷಣದ ಬಾಗಿಲುಗಳು ತೆರೆದಿರಬೇಕು ಎಂಬುದು ಎಲ್ಲರ ಆಶಯ. ಸರ್ಕಾರಿ ಸಂಸ್ಥೆಗಳನ್ನು ಮುಚ್ಚುವ ಹಕ್ಕು ಸರ್ಕಾರಕ್ಕೆ ಇಲ್ಲ. ನಮ್ಮ ಶಾಲೆ ನಮ್ಮ ಹಕ್ಕು, ಅದನ್ನು ನಮ್ಮಿಂದ ಕಸಿಯಲು ನಾವು ಬಿಡುವುದಿಲ್ಲ ಎಂಬ ಸಂಕಲ್ಪ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಐಡಿಎಸ್‌ಓನ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಮಾತನಾಡಿ, ಈ ವರ್ಷ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಸರ್ಕಾರ ಹೇಳಿದೆ. ಈ ಸುದ್ದಿಯಿಂದ ರಾಜ್ಯದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶಾಶ್ವತವಾಗಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುನೀತ್‌ ಕುಮಾರ್ ಮಾತನಾಡಿ, ಇಂದಿನ ಲಾಭಕೋರ ವ್ಯವಸ್ಥೆಯ ಅಡಿಯಲ್ಲಿ ಸಿಲುಕಿ ಶಿಕ್ಷಣ ಕ್ಷೇತ್ರ ಕಮರಿ ಹೋಗುತ್ತಿದೆ. ಸರ್ಕಾರದ ನೀತಿಗಳು ಶಿಕ್ಷಣವನ್ನು ಮತ್ತಷ್ಟು ದುಬಾರಿಗೊಳಿಸುವತ್ತ, ಖಾಸಗೀಕರಣಗೊಳಿಸುವತ್ತ ರೂವುಗೊಳ್ಳು ತ್ತಿವೆ. ಅಂತಹ ಒಂದು ನೀತಿ ಈಗ ಅತ್ಯಂತ ಚರ್ಚೆಗೆ ಹಾಗೂ ವಿವಾದಕ್ಕೆ ತುತ್ತಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಹಲವು ಶಿಕ್ಷಣ ವಿರೋಧಿ, ಬಡ ಜನ ವಿರೋಧಿ ಪ್ರತಿಪಾದನೆಗಳು ಅಡಕವಾಗುವ. ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎನ್ನುವುದು ಇದೆ. ಕರ್ನಾಟಕದಲ್ಲಿ ಅಂತಹ 13,800 ಸರ್ಕಾರಿ ಶಾಲೆಗಳ ಮುಚ್ಚುವಿಕೆಯು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಬಿ.ಕಾವ್ಯ, ಜಿಲ್ಲಾ ಸೆಕ್ರೆಟರಿ ಸದಸ್ಯರಾದ ಜಿ.ಪುಷ್ಪ, ಅಭಿಷೇಕ್, ಆಂಜನೇಯ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!