ಅವಳಿ ಮಕ್ಕಳ ಉಸಿರುಗಟ್ಟಿಸಿ ಕೊಂದ ನಿಷ್ಕರುಣಿ ತಂದೆ – ಆರೋಪಿ ಹೇಳಿದ್ದೇನು…?

ಸುದ್ದಿ360 ದಾವಣೆಗೆರೆ ಜೂ. 01: ಪ್ರಪಂಚವನ್ನು ಪರಿಚಯಿಸಬೇಕಿದ್ದ ಅಪ್ಪ ಪ್ರಪಂಚದ ಅರಿವೇ ಇರದ ತನ್ನ ಇಬ್ಬರು ಅವಳಿ ಮಕ್ಕಳನ್ನು  ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯ ಚಳಗೇರಿ ಟೋಲ್‍ಗೇಟ್‍ ಬಳಿ ನಡೆದಿದೆ.

ಹರಿಹರದ ಕಾರ್ಗೀಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್  ಕೆಲಸ ಮಾಡುತ್ತಿರುವ  ಅಮರ್ (36) ಈ ಕೃತ್ಯವೆಸಗಿರುವ ನಿಷ್ಕರುಣಿ ತಂದೆ.

ಈತ ಗೋಕಾಕ್ ಮೂಲದವನಾಗಿದ್ದು,  ಹಾಲಿ ದಾವಣಗೆರೆ ನಗರದ ಆಂಜನೇಯ ಬಡಾವಣೆ ವಾಸವಾಗಿದ್ದಾನೆ. ಪತ್ನಿ ಜಯಲಕ್ಷ್ಮಿ ತನ್ನ ತವರು ಊರಾದ ವಿಜಯಪುರದಲ್ಲಿದ್ದು, ಆರೋಪಿತನ  ತಾಯಿ ಸಾವೀತ್ರಮ್ಮ ಮನೆಯಲ್ಲಿದ್ದ ಸಂಧರ್ಭದಲ್ಲಿ ತನ್ನ ಮಕ್ಕಳಾದ ಅದ್ವೈತ್ ಮತ್ತು ಅನ್ವೀತ್, 04 ವರ್ಷ 04 ತಿಂಗಳಿನ  ಅವಳಿ  ಮಕ್ಕಳನ್ನು ಬುಧವಾರ ರಾತ್ರಿ 10-30 ಗಂಟೆ ಸಮಯದಲ್ಲಿ  ಕೊಲೆ ಮಾಡುವ ಉದ್ದೇಶದಿಂದಲೇ ಮಕ್ಕಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಚಳಗೇರಿ  ಟೋಲ್ ಹತ್ತಿರ ಕರೆದುಕೊಂಡು ಹೋಗಿ  ಸರ್ವೀಸ್  ರಸ್ತೆಯಲ್ಲಿ ಮಕ್ಕಳಿಬ್ಬರಿಗೂ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದನ್ನು ಪೊಲೀಸರೆದುರು ಒಪ್ಪಿಕೊಂಡಿರುವ ಆರೋಪಿತನನ್ನು ದಸ್ತಗಿರಿ ಮಾಡಲಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುದ್ದಿಮಾಂದ್ಯತೆ ಕೊಲೆಗೆ ಕಾರಣವಂತೆ !

ಮಕ್ಕಳು ಸ್ವಲ್ಪ ಬುದ್ದಿಮಾಂದ್ಯರಾಗಿದ್ದು, ಹಠ ಮಾಡುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದೇ ಉಸಿರುಗಟ್ಟಿಸಿ ಕೊಂದು ಹಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

admin

admin

Leave a Reply

Your email address will not be published. Required fields are marked *

error: Content is protected !!