ಎಸ್.ಎಸ್. ಕಪ್ ಕ್ರಿಕೆಟ್ ಬಹುಮಾನ ವಿತರಣೆ

ದಾವಣಗೆರೆ, ಜೂ.12: ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ  ಡಾ.ಶಾಮನೂರು ಶಿವಶಂಕರಪ್ಪನವರ 92ನೇ ಜನ್ಮದಿನದ ಅಂಗವಾಗಿ 20ನೇ ಬಾರಿಗೆ ಆಫಿಷಿಯಲ್ ಮತ್ತು ಎಸ್.ಎಸ್ ಕಪ್ ಕ್ರಿಕೆಟ್ ಪಂದ್ಯಾವಳಿ ಅದ್ದೂರಿಯಾಗಿ ನಡೆಸಲಾಯಿತು .        

ಈ ಪಂದ್ಯಾವಳಿಯ ಬಹುಮಾನ ವಿತರಣೆ ಸಮಾರಂಭವನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಮತ್ತು  ಉಪಾಧ್ಯಕ್ಷರಾದ  ಶಿವಗಂಗಾ ಶ್ರೀನಿವಾಸ್ ಹಾಗೂ ಪಂದ್ಯಾವಳಿಯ ವ್ಯವಸ್ಥಾಪಕರಾದ ಜಯಪ್ರಕಾಶ್ ಗೌಡ  ಅವರು ಬಹುಮಾನ ವಿತರಣೆ ಮಾಡಿದರು.

ಪಂದ್ಯಾವಳಿಯಲ್ಲಿ  ಅಫಿಷಿಯಲ್  ಕಪ್ ನಲ್ಲಿ ಮರ್ಚಂಟ್ಸ್ ತಂಡ ಪ್ರಥಮ ಸ್ಥಾನವನ್ನು, ಬೆಸ್ಕಾಂ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಅದೇ ರೀತಿ ಎಸ್.ಎಸ್.ಕಪ್ ಪಂದ್ಯಾವಳಿಯಲ್ಲಿ ಹೀರೋ ತಂಡ ಪ್ರಥಮ ಸ್ಥಾನವನ್ನು ಅಪ್ಪು ರಾಜ್ ತಂಡ ದ್ವಿತೀಯ ಸ್ಥಾನವನ್ನು ಪಡೆದಿವೆ.

admin

admin

Leave a Reply

Your email address will not be published. Required fields are marked *

error: Content is protected !!