ದಲಿತರ ಸಾಗುವಳಿಯಲ್ಲಿದ್ದ ಜಮೀನು ಸ್ಮಶಾನಕ್ಕೆ : ಬಹುಜನ ಸಮಾಜ ಪಾರ್ಟಿ ಖಂಡನೆ

ಸುದ್ದಿ360 ದಾವಣಗೆರೆ ಮಾ.6: ಜಿಲ್ಲೆಯ ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ದಲಿತರು ಸಾಗುವಳಿ ಮಾಡಿರುವ ಸರ್ಕಾರಿ ಭೂಮಿಯನ್ನು ಉದ್ದೇಶಪೂರ್ವಕವಾಗಿ ಸ್ಮಶಾನಕ್ಕೆ ಸೇರಿಸಲು ಹೊರಟಿರುವ ಕುತಂತ್ರವನ್ನು ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಾಲಕಟ್ಟೆ ಗ್ರಾಮದಲ್ಲಿ 15 ಎಕರೆ 30 ಸೆಂಟ್ಸ್ ಗೋಮಾಳ ಜಮೀನು ಇದ್ದು ಇದರಲ್ಲಿ 6 ಎಕರೆ ಜಮೀನನ್ನು 1 ಎಕರೆ 30 ಸೆಂಟ್ಸ್ ನಂತೆ 5 ಜನ ದಲಿತರು ಉಳುಮೆ ಮಾಡುತ್ತಿದ್ದಾರೆ.  ಇವರಿಗೆ ಈ ಜಮೀನು ಬಿಟ್ಟರೆ ಉಳುಮೆ ಮಾಡಲು ಬೇರೆ ಜಮೀನು ಇಲ್ಲ.  ಇಂತಹವರ ಜಮೀನನ್ನೇ ಸೇರಿಸಿ 8 ಎಕರೆ ಭೂಮಿಯನ್ನು ಕೇವಲ 500 ಮನೆ ಇರುವ ಗ್ರಾಮಕ್ಕೆ ಸ್ಮಶಾನವನ್ನಾಗಿ ಮಾರ್ಪಡಿಸಿದ್ದಾರೆ. ಉಳಿದ ಭೂಮಿಯನ್ನು 3ರಿಂದ 5 ಎಕರೆ ಜಮೀನು ಹೊಂದಿರುವ ಮೇ್ಲರ್ಗದವರು ಹೆಚ್ಚುವರಿಯಾಗಿ ಸರ್ಕಾರಿ ಭೂಮಿಯನ್ನು ಪಡೆದಿದ್ದಾರೆ. ದಲಿತರು ಭೂಮಿಯ ಒಡೆತನವನ್ನು ಹೊಂದಬಾರದು ಎಂಬ ದುರುದ್ದೇಶದಿಂದಲೇ ಈ ರೀತಿಯಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

 ಜಿಲ್ಲಾಧಿಕಾರಿಗಳು ಮೇಲ್ವರ್ಗದವರ ಈ ಕುತಂತ್ರವನ್ನು ಮನಗಂಡು ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು. ಸ್ಮಶಾನಕ್ಕೆ 2 ಎಕರೆ ಭೂಮಿಯನ್ನು ತೆಗೆದಿರಿಸಿ ಉಳಿದ ಭೂಮಿಯನ್ನು ಯಥಾ ಸ್ಥಿತಿಯಂತೆ ದಲಿತರಿಗೆ ಹಕ್ಕು ಪತ್ರ ನೀಡಿ ಖಾತೆ ರಿಜಿಸ್ಟರ್ ಮಾಡಿಸಿ ಕೊಡಬೇಕೆಂದು ಬಹುಜನ ಸಮಾಜ ಪಾರ್ಟಿ ಮುಖಂತರ ಮಾ.10ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್ ಇದ್ದರು.

Leave a Comment

error: Content is protected !!