ದಾವಣಗೆರೆಗೆ ಚಿನ್ನದ ಕಿರೀಟ ತೊಡಿಸಿದ ಗಿರೀಶ್

ಸುದ್ದಿ360 ದಾವಣಗೆರೆ, ಜೂನ್ 28: ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನ ಬಿ.ಎ. ಪದವಿಯ  ಮೂರನೇ ವರುಷದ ವಿಧ್ಯಾರ್ಥಿ ಗಿರಿಶ್ ಬಿ ಕುಮಾರ ಪಾಲ್ಯಂ ತಮಿಳುನಾಡು ಸೌತ್ ಇಂಡಿಯಾ ಕುಸ್ತಿ ಚಾಂಪಿಯನ್ ಶಿಪ್ 2022 ರ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಹರಿಹರ ತಾಲ್ಲೂಕು ಗುತ್ತೂರು ಹಳ್ಳಿಯ ನೀಲಮ್ಮ ಮತ್ತು ಬಸಪ್ಪ ಇವರ ಪುತ್ರ ಗಿರೀಶ್ ಬಿ. ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಇದ್ದುಕೊಂಡು ದೇವರಾಜ್ ಅರಸ್ ಕಾಲೇಜಿನಲ್ಲಿ ಬಿ.ಎ. ಪದವಿಯ ಮೂರನೇ ವರುಷದಲ್ಲಿ ಓದುತ್ತಿದ್ದಾರೆ. ಕಳೆದ ಎಂಟು ವರುಷಗಳಿಂದ ಕುಸ್ತಿ ಅಭ್ಯಾಸ ಮಾಡುತ್ತಿರುವ ಗಿರೀಶ್‍,  ಕುಸ್ತಿ  ತರಬೇತುದಾರ ಶಿಕ್ಷಕರಾದ ಶಿವನಂದ ಅವರ ಗರಡಿಯಲ್ಲಿ ಪಳಗಿದವರಾಗಿದ್ದಾರೆ.

ಇದೀಗ ತಮಿಳುನಾಡಿನ ಕುಮಾರ ಪಾಲ್ಯಂ ತಮಿಳುನಾಡು ಸೌತ್ ಇಂಡಿಯಾ ಕುಸ್ತಿ ಸ್ಪರ್ಧೆ 2022 ರಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಪದಕ ಗಳಿಸುವ ಮೂಲಕ  ದಾವಣಗೆರೆ ಜಿಲ್ಲೆಗೆ ಚಿನ್ನದ ಕಿರೀಟ ಮುಡಿಗೇರಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಜಿಲ್ಲೆಯ ಗಂಗಾ ಮತಸ್ಥ ಸಮಾಜದ ಹೆಮ್ಮೆಯ ಪುತ್ರ ಗಿರೀಶ್ ಗೆ ದಾವಣಗೆರೆ ಗಂಗಾಮತಸ್ಥ ಸಮಾಜದ ಸರ್ವ ಸದಸ್ಯರ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳನ್ನು ಜಿಲ್ಲೆಯ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಮಾಗನಳ್ಳಿ ಮಂಜುನಾಥ್‍ ತಿಳಿಸಿದ್ದಾರೆ.

ಕುಮಾರ ಗೀರೀಶ್ ರವರ  ಕುಸ್ತಿಯ ಚತುರತೆಗೆ ಈ ವರೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಹರಿದುಬಂದಿದ್ದು, ಥೈಲ್ಯಾಂಡ್ ನಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ, 23 ಅಂಡರ್ ನ್ಯಾಷನಲ್ ಸ್ಟೇಟ್ ಕುಸ್ತಿ ಸ್ಪರ್ಧೆ , ಮೈಸೂರು ದಸರಾ ಕುಸ್ತಿ ಸ್ಪರ್ಧೆ ಯಲ್ಲಿ ದ್ವೀತೀಯ ಸ್ಥಾನ , ಬೆಳಗಾಂ ಕುಸ್ತಿ ಹಬ್ಬ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!