ದಾವಣಗೆರೆಯಲ್ಲಿ ಜೂ.24ರಿಂದ 3 ದಿನಗಳ ನೀಲಕಂಠ ಆಭರಣ ಮೇಳ

ಸುದ್ದಿ360 ದಾವಣಗೆರೆ, ಜೂ.23: ನಗರದ ಶಾಮನೂರು ರಸ್ತೆಯ ಹೋಟೆಲ್ ಸದರ್ನ್ ಸ್ಟಾರ್‌ನಲ್ಲಿ ಜೂ.24ರಿಂದ ಮೂರು ದಿನಗಳ ಕಾಲ ನೀಲಕಂಠ ಜ್ಯುವೆಲ್ಲರ್ಸ್‌ ಸುವರ್ಣ ಸಮೃದ್ಧಿ  ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನೀಲಕಂಠ ಜ್ಯುವೆಲ್ಲರ್ಸ್‌ ಮ್ಯಾನೇಜರ್ ರಮೇಶ್ ಬಾಬು ಈ ಕುರಿತು ಮಾಹಿತಿ ನೀಡಿದರು. ಜೂ.24ರಂದು ಬೆಳಗ್ಗೆ 11 ಗಂಟೆಗೆ ಉದ್ಯಮಿ ಎಸ್.ಎಸ್. ಗಣೇಶ್ ಹಾಗೂ ರೇಖಾ ಗಣೇಶ್ ಮೇಳಕ್ಕೆ ಚಾಲನೆ ನೀಡುವರು. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ನೀಲಕಂಠ ಜ್ಯುವೆಲ್ಲರ್ಸ್‌ ಸಿಇಒ ಗುರುಮುಖ್ ಸಿಂಗ್ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಬೆಂಗಳೂರಿನ ರಿಚ್‌ಮಂಡ್ ರಸ್ತೆ ಹಾಗೂ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೀಲಕಂಠ ಜ್ಯುವೆಲ್ಲರ್ಸ್‌ ಮಳಿಗೆಗಳಿದ್ದು, ದಾವಣಗೆರೆಯ ಬಹಳಷ್ಟು ಗ್ರಾಹಕರು ಅಲ್ಲಿಗೆ ಭೇಟಿ ನೀಡಿ ಆಭರಣ ಖರೀದಿಸುತ್ತಾರೆ. ನಗರದ ಗ್ರಾಹಕರ ಕೋರಿಕೆ ಮೇರೆಗೆ ಪ್ರತಿ ವರ್ಷ ದಾವಣಗೆರೆಯಲ್ಲಿ ಆಭರಣ ಮೇಳ ಆಯೋಜಿಸಲಾಗುತ್ತದೆ. ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಮೇಳ ನಡೆದಿರಲಿಲ್ಲ ಎಂದು ಹೇಳಿದರು.

ಪ್ರಮುಖ ಆಕರ್ಷಣೆ

ಅತ್ಯುನ್ನತ ದರ್ಜೆ ಚಿನ್ನ ಮತ್ತು ವಜ್ರದ ಕಲಾತ್ಮಕ ಆಭರಣಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಅಲ್ಲದೆ ಸ್ಟಡೆಡ್, ಆಂಟಿಕ್, ಟೆಂಪಲ್ ವಿನ್ಯಾಸದ ಆಭರಣಗಳು, ವಜ್ರ ಹಾಗೂ ಪ್ಲಾಟಿನಮ್ ಆಭರಣಗಳು, ಅತ್ಯಮೂಲ್ಯ ಸ್ಟೋನ್ ಜ್ಯುವೆಲ್ಲರಿ ಮತ್ತು ಬೆಳ್ಳಿ ವಸ್ತುಗಳ ಸಂಗ್ರಹ ಈ ಮೇಳದಲ್ಲಿ ಲಭ್ಯವಿದೆ ಎಂದು ನೀಲಕಂಠ ಜ್ಯುವೆಲ್ಲರ್ಸ್‌ ಮ್ಯಾನೇಜರ್ ರಮೇಶ್ ಬಾಬು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಸಿಎಲ್ ಜಾಹೀರಾತು ಸಂಸ್ಥೆಯ  ಚೇತನ್, ಕಾರ್ತಿಕ್, ನವೀನ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!