ನಿವೃತ್ತ ಯೋಧನಿಂದ ಗಾಳಿಯಲ್ಲಿ ಗುಂಡು – ಗ್ರಾಮಸ್ಥರಲ್ಲಿ ಸಂಭ್ರಮ

ಸುದ್ದಿ360, ವಿಜಯಪುರ ಆ.5: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆ ದೇಶಾದ್ಯಂತ ಮನೆ ಮಾಡಿದ್ದು, ಇದೇ ಸಂದರ್ಭದಲ್ಲಿ ಸೇನೆಯಿಂದ ನಿವೃತ್ತಿಯಾಗಿ ತನ್ನ ಗ್ರಾಮಕ್ಕೆ ಬಂದಿರುವ ಯೋಧನನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

ಸೇನೆಯಿಂದ ನಿವೃತ್ತಿಯಾಗಿ ತನ್ನ ಹುಟ್ಟೂರಾದ ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮಕ್ಕೆ ಆಗಮಿಸಿದ ಯೋಧನನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡ ವೇಳೆಯಲ್ಲಿ ಗ್ರಾಮಸ್ಥರ ಸಡಗರ ಸಂಭ್ರಮಕ್ಕೆ ಮಾರು ಹೋದ ಯೋಧ ಸುಭಾಸ್ ಜನವಾಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಸಂಭ್ರಮಿಸಿದ್ದಾರೆ.

ಇವರು ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯಾಗಿರುವ ಸುಭಾಸ್ ಜನವಾಡರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ಇತ್ತ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿ, ಭಾರತ ಮಾತಾಕಿ ಜೈ ಎಂಬ ಉದ್ಘೋಷಗಳನ್ನು ಕೂಗಿ ಸಂಭ್ರಮಿಸಿದ್ದಾರೆ.  ಯೋಧ  ಈ ರೀತಿ 3 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ದೃಶ್ಯವನ್ನು ಗ್ರಾಮಸ್ಥರು ವಿಡಿಯೋ ಮಾಡಿಕೊಂಡಿದ್ದು, ಅದೀಗ ಜಾಲ ತಾಣದಲ್ಲಿ ಹರಿದಾಡುತ್ತಿದೆ.

admin

admin

Leave a Reply

Your email address will not be published. Required fields are marked *

error: Content is protected !!