“ಬೇಡರ ಕಿವಿಯಲ್ಲಿ ಕಮಲ” – ಭರವಸೆ ಈಡೇರಿಸಿಲ್ಲ – ನಾಯಕ ಸಮುದಾಯದ ಪ್ರತಿಭಟನೆ

ದಾವಣಗೆರೆ: ನಾಯಕ‌ ಸಮುದಾಯಕ್ಲೆ ಕೊಟ್ಟಿದ್ದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಬೇಡರ ಕಿವಿಉಲ್ಲಿ ಕಮಲ ಎಂಬ ಘೋಷಣೆಯೊಂದಿಗೆ ನಾಯಕ‌ ಸಮುದಾಯ‌ ದಾವಣಗೆರೆ ಯಲ್ಲಿ ವಿನೂತನ ಪ್ರತಿಭಟನೆ ನಡೆಸಿತು.

 ಈ ಹಿಂದೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮೀತ್ ಷಾ ರವರು ಚಿತ್ರದುರ್ಗದಲ್ಲಿ ಮದಕರಿ ನಾಯಕರ 100 ಕೋಟಿ ವೆಚ್ಚದ ಥೀಮ್ ಪಾರ್ಕ್ ಮಾಡುವುದಾಗಿ ಘೋಷಿಸಿದ್ದು, ಇದುವರೆಗೂ ಸರ್ಕಾರ ಈ  ವಿಚಾರವಾಗಿ ಕಾರ್ಯಪ್ರವೃತ್ತರಾಗಿಲ್ಲ. ಹಾಗೂ

ನಮ್ಮ ಸಮುದಾಯದ ನಾಯಕ ಬಿ.ಶ್ರೀರಾಮುಲುರವರನ್ನು ಕೇವಲ ಚುನಾವಣೆಗಳಲ್ಲಿ ಹಾಗೂ ಮಾಜಿ

ಮುಖ್ಯಮಂತ್ರಿ ಸಿದ್ಧರಾಮಯ್ಯನಂತವರ ಎದುರು ಚುನಾವಣಾ ಅಭ್ಯರ್ಥಿಯಾಗಿ ಬಳಸಿಕೊಂಡು,

ಉಪಮುಖ್ಯಮಂತ್ರಿ ಸ್ಥಾನ ನೀಡದೇ, ಸೋತಂತಹ ವ್ಯಕ್ತಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು

ಕರ್ನಾಟಕ ನಾಯಕ ಸಮುದಾಯಕ್ಕೆ ಅತೀವ ನೋವುಂಟಾಗಿದ್ದು, ಸಮುದಾಯದ ಈ ಅಸಮಾಧಾನವನ್ನು

ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ತೋರಿಸುವ ನಿಟ್ಟಿನಲ್ಲಿ ದಾವಣಗೆರೆಯ ರಾಜ ವೀರಮದಕರಿ

ನಾಯಕ ಸರ್ಕಲ್‌ನಲ್ಲಿ ನಾಯಕ ಸಮುದಾಯದವರಿಂದ ಕಿವಿಯಲ್ಲಿ ಕಮಲ ಮುಡಿಯುವ ಮೂಲಕ

“ಬೇಡರ ಕಿವಿಯಲ್ಲಿ ಕಮಲ” ಎಂಬ ಹೋರಾಟವನ್ನು “ಅಯ್ಯೋಯ್ಯೋ ಅನ್ಯಾಯ, ಥೀಮ್ ಪಾರ್ಕ್

ಎಲ್ರಯ್ಯ, ಅಯ್ಯೋಯ್ಯೋ ಅನ್ಯಾಯ, ಡಿ.ಸಿ.ಎಂ.ಎಲ್ರಯ್ಯ” ಎಂಬ ಘೋಷ ವಾಕ್ಯದೊಂದಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಬಿ. ವೀರಣ್ಣ, ಪಿ.ಬಿ.ಅಂಜುಕುಮಾರ್, ಆರ್.ದೇವೇಂದ್ರಪ್ಪ, ಕೆ.ಎಂ.ಚನ್ನಬಸಪ್ಪ, ಟಿ.ಎಸ್.ಕರಿಯಪ್ಪ, ದೇವರಾಜ ಕಾಟೇಹಳ್ಳಿ, ರಾಜು ಮದಕರಿ, ಪಿ.ಅಜ್ಜಯ್ಯ, ಪ್ರವೀಣಕುಮಾರ್ ನಾಯಕ, ಆಂಜನೇಯ, ಗುರುರಾಜ್ ಎನ್. ಉಮೇಶ ಮದಕರಿ, ಪ್ರಭು ನರ‍್ಲಿಗಿ, ಬೆಳವನೂರು ದೇವಿ, ಶಾಮ್ ಜಿ. ಸುನೀಲ್ ಕೆ, ಮಲ್ಲಿಕಾರ್ಜುನ್, ನಿಖಿಲ್ ಎಂ.ಆರ್ ಹಾಗೂ ಸಮುದಾಯದ ಇನ್ನಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ಸಮುದಾಯಕ್ಕಾಗಿರುವ ಅನ್ಯಾಯದ

ವಿರುದ್ಧ ಪ್ರತಿಭಟಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!