ಸಿದ್ದು- ಡಿಕೆಶಿ ಕೈ ಎತ್ತಿದ್ದಾರೆ – ಯಾರು ಯಾರಿಗೆ ಚೂರಿ ಹಾಕ್ತಾರೋ ನೋಣೋಣ: ಎಚ್ ಡಿಕೆ

ಸುದ್ದಿ360 ರಾಮನಗರ, ಆ.4: ನಾನು ಕೈ ಎತ್ತಿಸ್ಕೊಂಡು ಬೆನ್ನಿಗೆ ಚೂರಿ ಹಾಕಿಸ್ಕೊಂಡಿದ್ದಾಯ್ತು. ಈಗ  ದಾವಣಗೆರೆಯಲ್ಲಿ ಇಬ್ಬರೂ ಕೈ ಕೈ ಹಿಡಿದು ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೋ ಮುಂದೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಚನ್ನಪಟ್ಟಣದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ತಮ್ಮ ಕೈಗಳನ್ನು ಎತ್ತಿ ಜನರಿಗೆ ಒಗ್ಗಟ್ಟು ಪ್ರದರ್ಶಿಸಿರುವುದರ ಕುರಿತಾಗಿ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ ಕೈ ಎತ್ತುವುದು ಮತ್ತು ಇಳಿಸುವುದು ನಡೆಯುತ್ತಿರುತ್ತದೆ. ಮುಂದೆ ನೋಡೋಣ ಎಂದಿದ್ದಾರೆ.

Leave a Comment

error: Content is protected !!