11ತಿಂಗಳ ಮಗುವಿನೊಂದಿಗೆ ತಾಯಿ ನೇಣಿಗೆ ಶರಣು

ದಾವಣಗೆರೆ: 11 ತಿಂಗಳ ಹಸುಗೂಸಿನ ಜೊತೆ ತಾಯಿಯು ನೇಣಿಗೆ ಶರಣರಾಗಿರುವ ಹೃದಯವಿದ್ರಾವಕ ಘಟನೆ ಜಗಳೂರು ಪಟ್ಟಣದ ಜೆ. ಸಿ. ಆರ್. ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.
22 ವರ್ಷದ ನಿಖಿತ ಹಾಗೂ 11 ತಿಂಗಳ ಗಂಡು ಮಗು ಅನ್ವಿಷ್ ಇಹಲೋಕ ತ್ಯಜಿಸಿದ ದುರ್ದೈವಿಗಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಇಂಜಿನಿಯರ್ ಮನೋಜ್ ಕುಮಾರನೊಂದಿಗೆ ವಿವಾಹ ಆಗಿದ್ದ ನಿಖಿತಾ ಸೋಮವಾರವಷ್ಟೇ ತವರಿಗೆ ಬಂದಿದ್ದರು. ಮನೋಜ್ ಕುಮಾರ್ ಅವರು ಕೆಲಸಕ್ಕೆಂದು ದಾವಣಗೆರೆಗೆ ಬಂದಿದ್ದಾರೆ. ನಿಖಿತಾ ತಂದೆ ತಾಯಿಗಳಿಬ್ಬರು ಶಿಕ್ಷಕರಾಗಿದ್ದು, ಅವರು ಬೆಳಿಗ್ಗೆ ಕರ್ತವ್ಯಕ್ಕೆಂದು ಶಾಲೆಗೆ ಹೋದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಆದ್ರೆ,
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅನ್ವಿಷ್ ಜೊತೆ ತಾಯಿ ನಿಖಿತ ನೇಣಿಗೆ ಕೊರಳೊಡ್ಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ.

admin

admin

Leave a Reply

Your email address will not be published. Required fields are marked *

error: Content is protected !!