ಸಾಯಲು ನೀರಿಗೆ ದುಮುಕಿದವಗೆ ಗರಿಗೆದರಿದ ಜೀವದ ಆಸೆ – ಅದೃಷ್ಟವಶಾತ್ ಬದುಕುಳಿದ ಜೀವ

ಸುದ್ದಿ360, ಬಾಗಲಕೋಟೆ ಜು.25: ಆತ್ಮಹತ್ಯೆಗೆ ಯತ್ನಿಸಿ ಸೇತುವೆಯಿಂದ ನೀರಿಗೆ ದುಮುಕಿದ ವ್ಯಕ್ತಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿರುವ ಘಟನೆ ಭಾನುವಾರ ಮಧ್ಯಾಹ್ನ ಅನಗವಾಡಿ ಸೇತುವೆ ಬಳಿ ನಡೆದಿದೆ.

ಗದ್ದನಕೇರಿ ಕ್ರಾಸ್ ಬಳಿಯ ವೀರಾಪುರದ ನಿವಾಸಿ 43ರ ವಯೋಮಾನದ ಚನ್ನಬಸಪ್ಪ ಯಲಗನ್ನವರ  ಎಂಬ ವ್ಯಕ್ತಿ ಹೀಗೆ ಬದುಕಿ ಬಂದವರು.

ಸಾವನ್ನಪ್ಪಲು ಅನಗವಾಡಿ ಸೇತುವೆಯ ಮೇಲಿಂದ ತುಂಬಿಹರಿಯುತ್ತಿರುವ ಘಟಪ್ರಭೆಗೆ ಜಿಗಿದ ಈತ ನೀರಿಗೆ ಬೀಳುತ್ತಿದ್ದಂತೆ ಬದುಕುವ ಆಸೆ ಮೊಳೆತಿದೆ. ಇದರಿಂದ ನೀರಿನ ಮಧ್ಯದ ಸೇತುವೆ ಕಂಬವನ್ನು ಆಸರೆಯಾಗಿ ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾನೆ.

ಇದನ್ನು ಗಮನಿಸಿ ಜನ ಅಗ್ನಿಶಾಮಕ ಪಡೆ, ಕಲಾದಗಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದವರು ಹಗ್ಗ ಹಾಗೂ ಟ್ಯೂಬ್ ಮೂಲಕ ಆತನನ್ನು ಮೇಲೆತ್ತಿ ಜೀವ ಉಳಿಸಿದ್ದಾರೆ.

ಅತ್ಮಹತ್ಯೆಗೆ ಮುಂದಾಗಲು ಕಾರಣ ಸ್ಪಷ್ಟವಾಗಿ ತಿಳಿದುಬಂದಿಲ್ಲ

admin

admin

Leave a Reply

Your email address will not be published. Required fields are marked *

error: Content is protected !!