ಕೆಲವೇ ಕ್ಷಣಗಳಲ್ಲಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ಮೂವರು ನಾಯಕರ ಭೇಟಿ . . .

ರಾಜಕಾರಣದಲ್ಲಿ ತಾಳ್ಮೆ ಬೇಕು – ವೈಯ್ಟ್ ಅಂಡ್ ಸಿ ಎಂದ ಜಗದೀಶ್‍ ಶೆಟ್ಟರ್

ಸುದ್ದಿ360 ಹುಬ್ಬಳ್ಳಿ ಏ.15: ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾತ್ರಿ 8.30ಕ್ಕೆ ತಮ್ಮ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ತದನಂತರ ನಿರ್ಧಾರವನ್ನು ಪ್ರಕಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‍ ಶೆಟ್ಟರ್  ಹೇಳಿದ್ದಾರೆ.

ಈ ಕುರಿತು ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, ವರಿಷ್ಠರಿಂದ ಸೂಕ್ತ ಸ್ಪಂದನೆ ಬರುವ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ತಿಳಿಸಿರುವ ಅವರು, ಪಕ್ಷದಿಂದ ಟಿಕೆಟ್  ಸಿಕ್ಕದಿದ್ದಲ್ಲಿ ಬಂಡಾಯ ಏಳುವುದು ಖಚಿತ  ಎನ್ನುವ ಸಂದೇಶವನ್ನು ಸಹ  ಈ ಸಂದರ್ಭದಲ್ಲಿ ಹೊರಹಾಕಿದ್ದಾರೆ.

ಸಭೆಯಲ್ಲಿ ಚರ್ಚಿಸಿದ ನಂತರ ಮುಂದಿನ ನಡೆಯ ಬಗ್ಗೆ  ಮಾಹಿತಿ ನೀಡುವುದಾಗಿ ಅವರು ತಮ್ಮ ಮುಂದಿನ ನಡೆಯನ್ನು ಸಸ್ಪೆನ್ಸ್ ನಲ್ಲೇ ಇಟ್ಟಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!