ಕಳವು ಪ್ರಕರಣ: 24 ಗಂಟೆಯೊಳಗೆ ಆರೋಪಿತರ ಬಂಧನ – 86,030 ರೂ ನಗದು ಜಫ್ತಿ

theft-case-arrest-accused-within-day-davangere

ಸುದ್ದಿ360 ದಾವಣಗೆರೆ: ಕಳೆದ ರಾತ್ರಿ (11-07-2023) 12-45 ಗಂಟೆ ಸುಮಾರಿಗೆ ನಗರದ ಮಂಡಕ್ಕಿ ಭಟ್ಟಿ 01 ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮಿಲ್‌ನ ಬೀಗವನ್ನು ಹೊಡೆದು ಮೀಲ್‌ನಲ್ಲಿದ್ದ 86,030/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ  ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 24 ಗಂಟೆಯೊಳಗೆ ಪೊಲೀಸರು ಕಳುವಾದ ನಗದು ಸಮೇತ ಆರೋಪಿತರನ್ನು ಬಂಧಿಸಿದ್ದಾರೆ.

ಪ್ರಕರಣದ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ . ಬಸರಗಿ ಮತ್ತು ಮಲ್ಲೇಶ ದೊಡ್ಡಮನಿ, ಡಿವೈಎಸ್‌ಪಿ, ನಗರ ಉಪ ವಿಭಾಗ ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಇಮ್ರಾನ್ ಬೇಗ್, ಪೊಲೀಸ್ ನಿರೀಕ್ಷಕರು, ಆಜಾದ್ ನಗರ ಪೊಲೀಸ್ ಠಾಣೆ, ರವರ ನೇತೃತ್ವದಲ್ಲಿ, ಪುಷ್ಪಲತಾ, ಪಿಎಸ್‌ಐ, ಮತ್ತು ಸಿಬ್ಬಂದಿಗಳಾದ ಮಂಜುನಾಥ ನಾಯ್ಕ, ತಿಪ್ಪೇಸ್ವಾಮಿ ಬಿ,  ಕೃಷ್ಣ ಎನ್, ವೆಂಕಟೇಶ, ನಾಗರಾಜ ಡಿ ಬಿ, ಹರೀಶ್ ಎಸ್.ಬಿ ಇವರುಗಳನ್ನು ಒಳಗೊಂಡ ತಂಡ ಕಳ್ಳರ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಕರಣ ದಾಖಲಾಗಿ 24 ಗಂಟೆಯೊಳಗೆ  ಪ್ರಕರಣದ ಆರೋಪಿತರಾದ 01) ಖಾದರ್ ಬಾಷ 26ವರ್ಷ, ದಾವಣಗೆರೆ, 02) ಮುಭಾರಕ್, 27ವರ್ಷ, ದಾವಣಗೆರೆ ರವರನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ  ಒಟ್ಟು 86,030/- ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಡಾ.ಅರುಣ್ ಕೆ., ಐ.ಪಿ.ಎಸ್ ರವರು ಪ್ರಶಂಸನೆ ವ್ಯಕ್ತ ಪಡಿಸಿರುತ್ತಾರೆ.

admin

admin

Leave a Reply

Your email address will not be published. Required fields are marked *

error: Content is protected !!