ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

ಸುದ್ದಿ360 ದಾವಣಗೆರೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಭಾಷಣ ಸ್ಪರ್ಧೆ ಚಿಕ್ಕಿ ರಂಗೋಲಿ ಸ್ಪರ್ಧೆ ಮತ್ತು ಚಿಕ್ಕ ಮಕ್ಕಳ ವೇಷಭೂಷಣ ಸ್ಪರ್ಧೆಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಅಧ್ಯಕ್ಷತೆಯನ್ನ ಡಾ. ರವಿಕುಮಾರ್ ಎಜೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ವಾಮದೇವಪ್ಪ ಕಲೆ ಭಾಷೆ  ಹುಟ್ಟಿನಿಂದಲೇ ನೀಡಿದರೆ ಮುಂದಿನ  ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು ತಂದೆ ತಾಯಿಗಳು ಸಂಸ್ಕೃತಿ ಬಗ್ಗೆ ತಿಳಿ ಹೇಳಬೇಕು ಎಂದು ತಿಳಿಸಿದರು.

ಡಾ. ಧನಂಜಯ್ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು  ಡಾ. ಪುಷ್ಪಲತಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, ಮಕ್ಕಳಲ್ಲಿ ಶಿಸ್ತು ಸಂಯಮವನ್ನು ಬೆಳಸಬೇಕು ಎಂದು ಪೋಷಕರಿಗೆ ತಿಳಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಲಯ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕಿನ ಷಣ್ಮುಖಪ್ಪ ಜೆಆರ್ ಅವರು ಮಾತನಾಡುತ್ತಾ ಒಳ್ಳೆಯ ನಡೆ ನುಡಿ ಕಲಿಯಬೇಕು ಅದಕ್ಕೆ ತಕ್ಕನಾಗಿ ಪೋಷಕರು ಮತ್ತು ಶಿಕ್ಷಕರು ಸಹ ತಿದ್ದಿ ಮಕ್ಕಳಿಗೆ ಒಳ್ಳೆಯ ಬುದ್ಧಿಯನ್ನು ಹೇಳಿಕೊಡಬೇಕು ಎಂದು  ತಿಳಿಸಿದರು.

ಜಯಲಕ್ಷ್ಮಿ ಮಹೇಶ್ ಮತ್ತು ಹೆಚ್. ಕೆ. ಕಲ್ಲಪ್ಪ ಮಾತನಾಡಿದರು. ಡಾ. ರವಿಕುಮಾರ್ ಎಜೆ ಮಾತನಾಡುತ್ತಾ ಸಾಹಿತ್ಯ ಸಂಸ್ಕೃತಿ ಕಲೆ ಕನ್ನಡಪರ ಹೋರಾಟ  ಮಕ್ಕಳ ಸಾಹಿತ್ಯ ಪರಿಷತ್ ಮುಂದೆ ಇರುತ್ತದೆ  ಹಾಗೂ ಮಕ್ಕಳಲ್ಲಿನ ಪ್ರತಿಭೆಯನ್ನ  ಹೊರ ತರುವ ಕೆಲಸವನ್ನು ನಾವು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ  ಕಾರ್ಯಕ್ರಮವನ್ನು ಮಾಡುತ್ತೇವೆ ಇದಕ್ಕೆ ಪೋಷಕರು ಮತ್ತು ಶಾಲೆಯ ಶಿಕ್ಷಕರುಗಳು ಸಹಕಾರ ನೀಡಿದರೆ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಶುಭ ಐನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ದೀಪ ಮತ್ತು ರೇಖಾ ವಂದನಾರ್ಪಣೆಯನ್ನು ಕುಮಾರ್ ಮಾಡಿದರು. ಪರಿಷತ್ತಿನ ಪದಾಧಿಕಾರಿಗಳಾದ ಸುರೇಶ್ ಚೌಹಾನ್, ಎಸ್‍.ಕೆ. ಬೀರಪ್ಪ , ಎಂ ಆರ್ ಹರೀಶ್ , ತೆಲಗಿ ವೀರಭದ್ರಪ್ಪ ಇತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಕ್ಷಿಣ ವಿಭಾಗದ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆಯನ್ನು ಭಾರತ ಸೇವಾದಳ  ಸಭಾಂಗಣದಲ್ಲಿ ಆ.12ರಂದು  ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ರವಿಕುಮಾರ್ ಎಜೆ ಅಧ್ಯಕ್ಷತೆ ವಹಿಸಿದ್ದರು ಅತಿಥಿಗಳಾಗಿ ಕೆಬಿ ಕೊಟ್ರೇಶ್ ಮತ್ತು ವೀಕ್ಷಕರಾಗಿ ರಶ್ಮಿ ಮತ್ತು ಶುಭ ಐನಹಳ್ಳಿ ಇದ್ದರು.
admin

admin

Leave a Reply

Your email address will not be published. Required fields are marked *

error: Content is protected !!