ಲಿಂಗೈಕ್ಯ ಶಿವಕುಮಾರ ಶ್ರೀಗಳವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ  ದಾವಣಗೆರೆ ತಾಲ್ಲೂಕು ವತಿಯಿಂದ ಭಕ್ತಿ ಸಮರ್ಪಣಾ ಪೂರ್ವಭಾವಿ ಸಭೆ

ಸುದ್ದಿ360  ದಾವಣಗೆರೆ ಸೆ :14: ಕರ್ನಾಟಕದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (shri shivakumara shivacharya mahaswami) 31ನೆಯ ಶ್ರದ್ಧಾಂಜಲಿ ಸಮಾರಂಭ ಇದೇ ಸೆ. 20ರಿಂದ 24ರವರೆಗೆ ಸಿರಿಗೆರೆಯಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಲಿದೆ.

ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದಾಸೋಹಕ್ಕೆ ದಾವಣಗೆರೆ ತಾಲ್ಲೂಕಿನ ಭಕ್ತರಿಂದ ಅಕ್ಕಿ ಸಮರ್ಪಿಸಲಾಗುವುದು. ಆದುದರಿಂದ ಸೆ14ರ ಗುರುವಾರ ಸಾಯಂಕಾಲ 5:00 ಗಂಟೆಗೆ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ  ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಸಾಧು ಸದ್ಧರ್ಮ ಸಂಘದ ಅಧ್ಯಕ್ಷರಾದ ಹಾಲವರ್ತಿ ಮಹೇಶ್ವರಪ್ಪನವರ   ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀಗಳು ಈ ನಾಡು ಕಂಡ ಅಪರೂಪದ ಸಂತರು.  ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಂವಿಧಾನದ ಆಶಯಗಳನ್ನು ಜಾರಿಗೆ ತಂದ ಕೀರ್ತಿ ಶ್ರೀಗಳವರದು. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ನೂರಾರು ಶಾಲಾ ಕಾಲೇಜುಗಳು,  ಉಚಿತ ಪ್ರಸಾದ ನಿಲಯಗಳನ್ನು ತೆರೆದು ಮಧ್ಯ ಕರ್ನಾಟಕದಲ್ಲಿ  ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದವರು. ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿ ಮೂರು ದಶಕಗಳು ಕಳೆದರೂ ಅವರು ಕಟ್ಟಿ ಬೆಳೆಸಿದ ಸಂಘ, ಸಂಸ್ಥೆಗಳು, ಸಲ್ಲಿಸಿದ ಸೇವೆಯ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಗೊಳಿಸಲು ಕೋರಿದೆ.

admin

admin

Leave a Reply

Your email address will not be published. Required fields are marked *

error: Content is protected !!