ಅಮರನಾಥ: ಶಿವಮೊಗ್ಗದ 16 ಮಹಿಳೆಯರು ಸೇಫ್

ಸುದ್ದಿ360, ಶಿವಮೊಗ್ಗ, ಜು.09: ಶಿವಮೊಗ್ಗದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದ 16 ಮಹಿಳೆಯರು ಸುರಕ್ಷಿತವಾಗಿದ್ದು, ಇವರು ಈಗ ಹೆಲಿಪ್ಯಾಡ್ ಬಳಿ ತಂಗಿದ್ದು, ಶೀಘ್ರದಲ್ಲಿಯೇ ಶಿವಮೊಗ್ಗಕ್ಕೆ ಹಿಂತಿರುಗಲಿದ್ದಾರೆ.

ಮೈಸೂರಿನಿಂದ ಯಾತ್ರೆ ಕೈಗೊಂಡಿದ್ದ ವಕೀಲರ ತಂಡ ಕೂಡ ಸುರಕ್ಷಿತವಾಗಿದೆ. ಬೀದರ್ ನಿಂದ ತೆರಳಿದ್ದ ಯುವಕರ ತಂಡ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದು ಸುರಕ್ಷಿತವಾಗಿರುವುದಾಗಿ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಂಡಿಯನ್ ಟಿಬೆಟ್ ಫೋರ್ಸ್ ಸೇರಿದಂತೆ  ಎಲ್ಲ ಘಟಕಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಸಹಾಯವಾಣಿಯ ವಿವರ:

  • ಎನ್.ಡಿ.ಆರ್.ಎಫ್: 011-23438252, 011-23438253
  • ಕಶ್ಮೀರ್ ಡಿವಿಷನಲ್ ಹೆಲ್ಪ್ ಲ್ಲೈನ್: 0914- 2496240
  • ದೇವಸ್ಥಾನ ಮಂಡಳಿಯ ಸಹಯಾವಾಣಿ: 0194-2313149
  • ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676
  • ಸಹಾಯವಾಣಿ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ.

Leave a Comment

error: Content is protected !!