ರಂಗಭೂಮಿ ಡಿಪ್ಲೊಮಾಗೆ ಅರ್ಜಿ ಆಹ್ವಾನ

ಸುದ್ದಿ360 ದಾವಣಗೆರೆ ಜು.25: ಮೈಸೂರಿನ ನಟನ ರಂಗಶಾಲೆಯು ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ ‘ರಂಗಭೂಮಿ ಡಿಪ್ಲೊಮಾ’ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಆ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರಿನ ರಾಮಕೃಷ್ಣ ನಗರದ ಕೆ ಬ್ಲಾಕ್‌ನಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ನಡೆಯಲಿದೆ. ಹಿರಿಯ ರಂಗ ಹಾಗೂ ಚಿತ್ರ ಕಲಾವಿದ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆ, ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಡಿಪ್ಲೊಮಾ ಪ್ರವೇಶಕ್ಕೆ 16ರಿಂದ 30 ವರ್ಷದೊಳಗಿನ … Read more

ಇ-ಕೆವೈಸಿಗೆ 31 ಕಡೆಯ ದಿನ

ಸುದ್ದಿ360 ದಾವಣಗೆರೆ ಜು.25: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಧನ ಸಹಾಯ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಜು.31 ಕಡೆಯ ದಿನವಾಗಿದೆ. ಜಿಲ್ಲೆಯ 1.51 ಲಕ್ಷ ರೈತರು ಯೋಜನೆ ಅಡಿ ಆರ್ಥಿಕ ನೆರವು ಪಡೆಯುತ್ತಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಫಲ ನೈಜ ಫಲಾನುಭವಿಗಳ ತಲುಪುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು http://pmkisan.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಫಾರ್ಮರ್ ಕಾರ್ನರ್‌ನಲ್ಲಿ … Read more

ನೈಋತ್ಯ ರೈಲ್ವೆ – ಯಾವ ರೈಲುಗಳ ಸೇವೆ ರದ್ದಾಗಿದೆ ಇಲ್ಲಿದೆ ಮಾಹಿತಿ

ಸುದ್ದಿ360, ಜು.25: ದೌಂಡ್ – ಕುರ್ದುವಾಡಿ  ಭಾಗದ ಭಿಗ್ವಾನ್‌ ಮತ್ತು ವಾಷಿಂಬೆ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾರ್ಯಕ್ಕೆ ಸಂಬಂಧಿಸಿದಂತೆ ನಾನ್-ಇಂಟರ್‌ಲಾಕಿಂಗ್ ಕಾಮಗಾರಿಯ ನಿಮಿತ್ತ ಕೇಂದ್ರೀಯ ರೈಲ್ವೆ ಸೂಚನೆಯಂತೆ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗುತ್ತದೆ. ರೈಲು ಸಂಖ್ಯೆ 22601 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್  – ಸಾಯಿನಗರ ಶಿರಡಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 27.07.2022 ಮತ್ತು 03.08.2022 ರಂದು ರದ್ದುಗೊಳಿಸಲಾಗುತ್ತದೆ. ರೈಲು ಸಂಖ್ಯೆ 22602 ಸಾಯಿನಗರ ಶಿರಡಿ – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ … Read more

ಇತಿಹಾಸದಿಂದ ದೇಶದ ಉಳಿವು: ಶಾಸಕ ಎಸ್.ಎ. ರವೀಂದ್ರನಾಥ್ ಅಭಿಮತ

ಸುದ್ದಿ360, ದಾವಣಗೆರೆ ಜು.25: ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಇತಿಹಾಸದಲ್ಲಿ ಅಡಕವಾಗಿದೆ. ಹೀಗಾಗಿ ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದ್ದು, ದೇಶದ ಭದ್ರ ಬುನಾದಿ ಇತಿಹಾದಲ್ಲಿ ಅಡಕವಾಗಿದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು. ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಬಸವನಕೋಟೆ ಗೌಡ್ರ ವಂಶಸ್ಥರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಲೇಖಕ ಬಿ.ಎಸ್. ಸಿದ್ದೇಶ್ ಅವರ ಶ್ರೀ ಬೊಮ್ಮಲಿಂಗೇಶ್ವರ ಭಕ್ತರ ಹಿನ್ನೆಲೆ ಕುರಿತ ಸಂಶೋಧನಾ ಕೃತಿ ಲೋಕಾರ್ಪಣೆ … Read more

‘ಶೌಚಾಲಯ ಸೌಲಭ್ಯವಿಲ್ಲದೆ ಉದ್ಘಾಟನೆಗೊಂಡಿರುವ ಸ್ಮಾರ್ಟ್ ಸಿಟಿ ಬಸ್ ಸ್ಟ್ಯಾಂಡ್ – ನಾಚಿಕೆ ಯಾರಿಗೆ ಆಗಬೇಕು?’ ಕೆ.ಎಲ್.ಹರೀಶ್ ಬಸಾಪುರ

ಶೌಚಾಲಯವಿದ್ದರೂ ಬಳಕೆಗೆ ಲಭ್ಯವಿಲ್ಲ ಹಳೆ ದಾವಣಗೆರೆಯಲ್ಲಿ ತಿಂಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡು, ಸಾರ್ವಜನಿಕ  ಉಪಯೋಗಕ್ಕೆ ನೀಡಲಾಗಿದೆ. ಇದಾಗಿ ತಿಂಗಳು ಕಳೆಯುತ್ತಾ ಬಂದರು ಶೌಚಾಲಯ ಮಾತ್ರ ಬೀಗ ತೆರೆದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಂದರೆ ಕಳಪೆ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೊಂಡ ಯೋಜನೆಗಳು ಎಂಬ ಸಾರ್ವಜನಿಕ ಆಕ್ರೋಶಕ್ಕೆ ಒಳಗಾಗಿರುವ ಯೋಜನೆಗಳಲ್ಲಿ ಯೋಜನಯೇ ಹಳೆ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ಸ್ಟ್ಯಾಂಡ್ ಕೂಡ ಸೇರಿದೆ ಎಂದು ಕೆ.ಎಲ್ … Read more

ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಹೋರಾಟದ ಅಗತ್ಯವಿದೆ : ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ ಸಿ ಡೋಂಗ್ರೆ

ಸುದ್ದಿ360 ಶಿವಮೊಗ್ಗ, ಜು.25: ಬೆಲೆ ಏರಿಕೆ ನಿಯಂತ್ರಿಸಲಾಗದೆ ಜನಸಾಮಾನ್ಯರ ಬದುಕು ದುಸ್ತರವಾಗಿಸಿರುವ ಸರ್ಕಾರಗಳ ಮುಂದೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತೀವ್ರ ಹೋರಾಟದ ಅಗತ್ಯವಿದೆ. ಮತ್ತು ಅದಕ್ಕಾಗಿ ರೂಪರೇಷೆ ಸಿದ್ದಪಡಿಸಿಕೊಳ್ಳಬೇಕೆಂದು ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ ಸಿ ಡೋಂಗ್ರೆ ಹೇಳಿದರು. ಶಿವಮೊಗ್ಗ ನಗರದ ಭೋವಿಭವನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್(ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಆಯೋಜಿಸಿದ್ದ ಬಿಸಿಯೂಟ ತಯಾರಕ ಮಹಿಳೆಯರಿಗಿರುವ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು … Read more

ಸಚಿವ ಉಮೇಶ್ ಕತ್ತಿಯಿಂದ ಕುಟುಂಬ ರಾಜಕಾರಣ ಸಮರ್ಥನೆ

ಕುಟುಂಬ ರಾಜಕಾರಣದ ‘ಕತ್ತಿ’ ಝಳಪಿಸಿದ ಸಚಿವ ಉಮೇಶ್ ಕತ್ತಿ ಸುದ್ದಿ360 ವಿಜಯಪುರ, ಜು.25: ಪ್ರಧಾನಿ ಮೋದಿ ಹಾಗೂ ಯೋಗಿ ಇವರು ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದಲೇ ಬಂದವರು. ಕುಟುಂಬ ರಾಜಕಾರಣ ಇರೋದೆ ನಿಜ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, … Read more

ಸಾಯಲು ನೀರಿಗೆ ದುಮುಕಿದವಗೆ ಗರಿಗೆದರಿದ ಜೀವದ ಆಸೆ – ಅದೃಷ್ಟವಶಾತ್ ಬದುಕುಳಿದ ಜೀವ

ಸುದ್ದಿ360, ಬಾಗಲಕೋಟೆ ಜು.25: ಆತ್ಮಹತ್ಯೆಗೆ ಯತ್ನಿಸಿ ಸೇತುವೆಯಿಂದ ನೀರಿಗೆ ದುಮುಕಿದ ವ್ಯಕ್ತಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿರುವ ಘಟನೆ ಭಾನುವಾರ ಮಧ್ಯಾಹ್ನ ಅನಗವಾಡಿ ಸೇತುವೆ ಬಳಿ ನಡೆದಿದೆ. ಗದ್ದನಕೇರಿ ಕ್ರಾಸ್ ಬಳಿಯ ವೀರಾಪುರದ ನಿವಾಸಿ 43ರ ವಯೋಮಾನದ ಚನ್ನಬಸಪ್ಪ ಯಲಗನ್ನವರ  ಎಂಬ ವ್ಯಕ್ತಿ ಹೀಗೆ ಬದುಕಿ ಬಂದವರು. ಸಾವನ್ನಪ್ಪಲು ಅನಗವಾಡಿ ಸೇತುವೆಯ ಮೇಲಿಂದ ತುಂಬಿಹರಿಯುತ್ತಿರುವ ಘಟಪ್ರಭೆಗೆ ಜಿಗಿದ ಈತ ನೀರಿಗೆ ಬೀಳುತ್ತಿದ್ದಂತೆ ಬದುಕುವ ಆಸೆ ಮೊಳೆತಿದೆ. ಇದರಿಂದ ನೀರಿನ ಮಧ್ಯದ ಸೇತುವೆ ಕಂಬವನ್ನು ಆಸರೆಯಾಗಿ ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು … Read more

ಭಾನಾಪೂರ ಬಳಿ ನಡೆದ ಅಪಘಾತದಲ್ಲಿ ತಬ್ಬಲಿಗಳಾದ ಮೂವರು ಮಕ್ಕಳು

ಸುದ್ದಿ360 ಕೊಪ್ಪಳ ಜು.25: ಕಳೆದ ವರ್ಷ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳು, ಶನಿವಾರ ತಡರಾತ್ರಿ ನಡೆದ ಅಪಘಾತದಲ್ಲಿ ತಾಯಿ ಪಾರವ್ವನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಅಪಘಾತದಲ್ಲಿ ತಾಯಿ ಪಾರವ್ವ ಮೃತ ಪಟ್ಟರೇ, ಪುಟ್ಟರಾಜ್, ಭೂಮಿಕಾ ಹಾಗೂ ಬಸವರಾಜಗೆ ಗಾಯವಾಗಿದೆ. ಪಾರವ್ವ ಪತಿ ಬೀರಪ್ಪ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪರಿಣಾಮ ಬೀರಪ್ಪ, ಪಾರವ್ವ ದಂಪತಿಗಳ ಮಕ್ಕಳಾದ ಬಸವರಾಜ್, ಪುಟ್ಟರಾಜ, ಭೂಮಿಕಾ ತಂದೆ ತಾಯಿಗಳಿಲ್ಲದೆ ಅನಾಥರಾಗಿವುದು ಎಂಥಹವರಿಗೂ ಮನ ಮಿಡಿಯುವಂತೆ ಮಾಡಿದೆ. ಅಪಘಾತದಲ್ಲಿ ಗಾಯಗೊಂಡಿರುವ  ಈ ಮಕ್ಕಳು ಸದ್ಯ ಕೊಪ್ಪಳ ಜಿಲ್ಲಾ … Read more

ಜನರ ಒತ್ತಾಸೆಗೆ ಮಣಿದು ವಿಜಯೇಂದ್ರ ಸ್ಪರ್ಧೆ ಘೋಷಿಸಿದ್ದೇನೆ – ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ: ಬಿಎಸ್ ವೈ

ಸುದ್ದಿ360, ಬೆಂಗಳೂರು, ಜು.24: ಜನರ ಒತ್ತಾಸೆಗೆ ಮಣಿದು ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಬಿ.ವೈ ವಿಜಯೇಂದ್ರಗೆ ಬಿಟ್ಟುಕೊಡುವುದಾಗಿ ಶಿಕಾರಿಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದೇನೆ. ಆದರೆ ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಬಿ.ಎಸ್.ವೈ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿ, ಶುಕ್ರವಾರ ನಾನು ನೀಡಿದ ಹೇಳಿಕೆ ಗೊಂದಲಕ್ಕೆ ಎಡೆ ಮಾಡಿದೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ವಿಜಯೇಂದ್ರ ಸ್ಪರ್ಧೇ ಮಾಡುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದರು. ಇದು ನನ್ನ ಸಲಹೆ ಮಾತ್ರವಾಗಿದ್ದು ಬಜೆಪಿ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು. ಹಳೇ … Read more

error: Content is protected !!