ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣ-ರಾಧೆಯರ ಕಲರವ – ಪದ್ಮಾವತಿ ಡಿ ವೆರ್ಣೇಕರ್ ಇವರಿಗೆ ಪ್ರತಿಭಾ ಅಕಾಡೆಮಿಯಿಂದ ಬೆಸ್ಟ್ ಟೀಚರ್ ಪ್ರಶಸ್ತಿ
ಸುದ್ದಿ360, ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಶಾಲೆಯ ತುಂಬೆಲ್ಲಾ ಕೃಷ್ಣ- ರಾಧೆಯ ಅಲಂಕಾರದೊಂದಿಗೆ ಆಗಮಿಸಿದ್ದ ಚಿಣ್ಣರ ಕಲರವ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಮಕ್ಕಳು ಶ್ರೀಕೃಷ್ಣನ ನುಡಿಗಳು, ಭಗವದ್ಗೀತಾ ಪಠಣ, ಹಾಡು ಮತ್ತು ನೃತ್ಯಗಳನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಂತರದಲ್ಲಿ ಕಟ್ಟಿದ್ದ ಬೆಣ್ಣೆಯ ಮಡಕೆಯನ್ನು ಒಡೆದು ಬೆಣ್ಣೆ ಕದಿಯುವ ರೂಪಕವನ್ನು ನೃತ್ಯದ ಮೂಲಕ ನಡೆಸಿಕೊಟ್ಟ ಕೃಷ್ಣ ಮತ್ತು ರಾಧೆ ವೇಶಾಧಾರಿ … Read more