ಬೈಕ್‍ ಕಳ್ಳನ ಬಂಧನ 5 ಬೈಕ್ ವಶ

bike-thief-arrested-5-bikes-seized

ಸುದ್ದಿ360ದಾವಣಗೆರೆ: ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದಿಂದ ಈ ಕೃತ್ಯ ಬೆಳಕಿಗೆ ಬಂದಿದ್ದು, ನಗರದ ರಾಮ ಮಂದಿರ ಪಾರ್ಕ್ ಬಳಿ ಜು.7ರಂದು ನಿಲ್ಲಿಸಿದ್ದ ಬೈಕ್ ಕಳುವಾದ ಬಗ್ಗೆ ಪವನ್ ಎಂಬುವರು ಬಡಾವಣೆ ಠಾಣೆಗೆ ದೂರು ನೀಡಿದ್ದರು. ನಗರವಾಸಿ ಶಾಹೀದ್(21)ಬಂಧಿತ ಆರೋಪಿಯಾಗಿದ್ದು, ಈತನಿಂದ 1.30 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತನನ್ನು ತಡೆದು ವಿಚಾರಿಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾನೆ. … Read more

‘ಘಂಟೆ ಹೊಡೆಯಲು ಸಿದ್ಧ’ – ದಿನೇಶ್‍ ಶೆಟ್ಟಿ ಸವಾಲು ಸ್ವೀಕರಿಸಿದ ಯಶವಂತರಾವ್‍ ಜಾಧವ್  

Yashwantrao Jadhav accepted the challenge

ದಿನಾಂಕ ನಿಗದಿ ಮಾಡಿ – ‘ಎಸ್‍ಎಸ್‍ಎಸ್‍ ಮತ್ತು ಎಸ್ಎಸ್ ಮಲ್ಲಿಕಾರ್ಜುನ್ ದುಗ್ಗಮ್ಮನ ಗುಡಿಗೆ ಬರಲಿ’ ಸುದ್ದಿ360 ದಾವಣಗೆರೆ:  ದಾಖಲೆಗಳಿಲ್ಲದೆ ನಾನು ಮಾತಾಡಲ್ಲ. ಹಗಲು ದರೋಡೆ ಮಾಡಿರುವವರೇ ಆರೋಪ ಮಾಡಿರುವುದು ಹಾಸ್ಯಾಸ್ಪದ. ಯಾವ ಸಮಯಕ್ಕೆ ಕರೆದರೂ ನಾವು ದುರ್ಗಮ್ಮನ ಗುಡಿಗೆ ಬಂದು  ಘಂಟೆ ಹೊಡೆಯಲು ನಾನು ಮತ್ತು ಸಿದ್ದೇಶ್ವರ ಸಿದ್ಧರಿದ್ದೇವೆ. ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್‍ ಎಸ್‍ ಮಲ್ಲಿಕಾರ್ಜುನ್‍ ಬರಲಿ. ದಿನೇಶ್‍ ಶೆಟ್ಟಿಯವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು. … Read more

ಅಧಿಕಾರಿಗಳ ಆಂಗ್ಲ ದರ್ಬಾರ್ : ‘ಎಚ್ಚೆತ್ತುಕೊಳ್ಳದಿದ್ದರೆ ಕರವೇಯಿಂದ ಘೇರಾವ್‍ ಎಚ್ಚರ’

ಸುದ್ದಿ360 ದಾವಣಗೆರೆ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊನ್ನೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳ ಆಂಗ್ಲ ದರ್ಬಾರ್ ನಿಂದ ಕೂಡಿತ್ತು ಎಂಬುದಾಗಿ ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ಖಂಡಿಸಿದ್ದು, ಮುಂದುವರೆದಲ್ಲಿ ಇಂತಹ ಸಭೆಗಳ ಮೇಲೆ ಕರವೇ ದಾಳಿ ನಡೆಸಿ ಅಧಿಕಾರಿಗಳಿಗೆ ಘೇರಾವ್ ಮಾಡಲಾಗುವುದು ಎಂದು ವೇದಿಕೆ ಜಿಲ್ಲಾಧ್ಯಕ್ಷರಾದ ಎಂ.ಎಸ್.ರಾಮೇಗೌಡ ಎಚ್ಚರಿಸಿದ್ದಾರೆ. ಸಭೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಭಾಗವಹಿಸಿದ್ದ  ಗುಂಜನ್ ಕೃಷ್ಣರವರು ಜಿಲ್ಲೆಯ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲೆ … Read more

ಜು.19ರಿಂದ ಗೃಹಲಕ್ಷ್ಮೀಗೆ ಅರ್ಜಿ ಆರಂಭ:  ಅರ್ಜಿ ಸಲ್ಲಿಕೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು…

gruhalakshmi-karnataka-suddi360

ಸುದ್ದಿ360 ಬೆಂಗಳೂರು: ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ (gruha lakshmi) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 19 ರಿಂದ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ (Minister of Women and Child Welfare) ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮನೆ ಯಜಮಾನಿಗೆ ಈ ಯೋಜನೆಯ ಹಣ ದೊರೆಯಲಿದ್ದು, ಯಾವುದೇ ಕಡೆಯ ದಿನಾಂಕ … Read more

‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮಹಿಳಾ ಶಕ್ತಿ ಮುಂದಾಗಬೇಕು’

NFIW ಮಹಿಳಾ ಸಂಘಟನಾ ಸಭೆಯಲ್ಲಿ ಸಿಪಿಐ ಮುಖಂಡ ಕಾಂ. ಆನಂದರಾಜ್ ಸುದ್ದಿ360 (suddi360) ದಾವಣಗೆರೆ (davangere news):  ಎಲ್ಲಾ ಹೋರಾಟಗಳ ಪೈಕಿ ಮಹಿಳಾ ಶಕ್ತಿಯ ಹೋರಾಟ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ( ಜಿಲ್ಲಾ ಮುಖಂಡರಾದ ಕಾಂ. ಆನಂದರಾಜ(anandaraj) ರವರು ಹೇಳಿದರು. ಅವರಿಂದು ದಾವಣಗೆರೆ ಅಶೋಕ ರಸ್ತೆಯಲ್ಲಿರುವ ಕಾಂ ಪಂಪಾಪತಿ ಭವನದಲ್ಲಿ NFIW ಅಖಿಲ ಭಾರತ ಮಹಿಳಾ ಒಕ್ಕೂಟದ ಜಿಲ್ಲಾ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡುತ್ತ ಮಹಿಳೆಯರ ಹೋರಾಟಕ್ಕೆ ಯಾವುದೇ ಸರ್ಕಾರಗಳು ಮಣಿಯುತ್ತವೆ … Read more

ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಉತ್ತರ ಖಂಡಿಸಿ ಬಿಜೆಪಿ ಸಭಾತ್ಯಾಗ

ಆಪರೇಷನ್ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭ: ಬಸವರಾಜ ಬೊಮ್ಮಾಯಿ ಸುದ್ದಿ360 ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ಚರ್ಚಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕ‌ ಉತ್ತರ ನೀಡಿಲ್ಲ ಎಂದು ಖಂಡಿಸಿ, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಬದಲು ಮೂರು ಕೆಜಿ ಅಕ್ಕಿ ಕೊಡುತ್ತಿರುವುದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಕ್ಕೆ ಆಕ್ಷೇಪಿಸಿ ತಿರುಗೇಟು ನೀಡಿ ಬಸವರಾಜ ಬೊಮ್ಮಾಯಿ … Read more

ಅಪಘಾತ – ವೈದ್ಯ ವಿದ್ಯಾರ್ಥಿ ಸಾವು – ಆರ್ಯುರ್ವೇದ ವಿದ್ಯಾರ್ಥಿಗಳ ಪ್ರತಿಭಟನೆ

davangere-ayurvedic-student-accident

ಸುದ್ದಿ360 ದಾವಣಗೆರೆ (Davangere) : ನಗರದ ಪಿ.ಬಿ. ರಸ್ತೆಯ ಬಾತಿ ಕೆರೆ ಬಳಿ ಇರುವ ಆಯುರ್ವೇದ ಕಾಲೇಜು (ayurvedic college) ಸಮೀಪ  ರಸ್ತೆ ದಾಟುತ್ತಿದ್ದ ಆಯುರ್ವೇದ ವಿದ್ಯಾರ್ಥಿಗೆ  ಹಾಲಿನ ಡೇರಿ ವಾಹನ ಡಿಕ್ಕಿ ಹೊಡೆದ ಪರಿಣಾಮ  ಗಂಭೀರವಾಗಿ ಗಾಯಗೊಂಡಿದ್ದ ಆಯುರ್ವೇದ ವಿದ್ಯಾರ್ಥಿ (ayurvedic student) ಆಸ್ಪತ್ರೆಗೆ (hospital) ಸಾಗಿಸುತ್ತಿದ್ದ ಮಾರ್ಗಮಧ್ಯೆ ಮೃತ ಪಟ್ಟಿರುವ (passed away) ಘಟನೆ ಬುಧವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿ ಡಾ. ಮನೋಜ್‍ ಕುಮಾರ್(20) ದಾವಣಗೆರೆಯ ಎಚ್‌ಕೆಆರ್ ನಗರ ನಿವಾಸಿ ಶಿವಕುಮಾರಸ್ವಾಮಿಯವರ ಪುತ್ರ. … Read more

ದಾವಣಗೆರೆ: ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಕಿರಿಕಿರಿ- ಮಹಾನಗರ ಪಾಲಿಕೆ ಮೇಯರ್ ವಿನಾಯಕ್‍ ಪೈಲ್ವಾನ್ ಸ್ಥಳಕ್ಕೆ ಭೇಟಿ

davangere-corporation-mayor-spot-visit

ತ್ವರಿತ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಮೇಯರ್ ಸೂಚನೆ ಸುದ್ದಿ360 ದಾವಣಗೆರೆ: ನಗರದ ಕೆಲವೆಡೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿ(construction) ಗಳು ಶೀಘ್ರಗತಿಯಲ್ಲಿ ಸಾಗುತ್ತಿಲ್ಲ ಮತ್ತು ಇದರಿಂದ ಪಾದಚಾರಿಗಳು, ವಾಹನ ಸವಾರರು ಸೇರಿದಂತೆ ಸಾರ್ವಜನಿಕರಿಗೆ ಕಿರಿಕಿರಿ(annoyance)ಯಾಗುತ್ತಿದೆ ಎಂಬ ದೂರು(complaints)ಗಳು ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ (Municipal Corporation Mayor) ವಿನಾಯಕ್‍ ಪೈಲ್ವಾನ್ ಹಾಗೂ ವಿರೋಧಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್‍ ಅಧಿಕಾರಿಗಳ ಜೊತೆ ಇಂದು ಸ್ಥಳ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ನಗರದ ಕೆಟಿಜೆ ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ … Read more

ಕರ್ನಾಟಕ ರಾಜ್ಯ  ಹಿಂದುಳಿದ ವರ್ಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾಗಿ ಮಲ್ಲಿಕಾರ್ಜುನ್ ಕಬ್ಬೂರು, ಕಾರ್ಯಾಧ್ಯಕ್ಷರಾಗಿ ರಾಜು ನದಾಫ್ ಅವಿರೋಧ ಅಯ್ಕೆ

mallikarjun-kabbur-as-state-president-raju-nadaf-as-working-president

ಸುದ್ದಿ360 ಬೆಂಗಳೂರು: ಕರ್ನಾಟಕ ರಾಜ್ಯ   ಹಿಂದುಳಿದ ವರ್ಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾಗಿ ದಾವಣಗೆರೆಯ ಮಲ್ಲಿಕಾರ್ಜುನ್ ಕಬ್ಬೂರು ಹಾಗೂ ಕಾರ್ಯಾಧ್ಯಕ್ಷರಾಗಿ ಬೆಳಗಾವಿಯ ರಾಜು ನದಾಫ್ ಅವಿರೋಧ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ವರ್ತಾ ಇಲಾಖೆಯ ಸಭಾಂಗಣದಲ್ಲಿ ಇಂದು (ಬುಧವಾರ) ನಡೆದ ಹಿಂದುಳಿದ ವರ್ಗಗಳ ಜಿಲ್ಲಾ ಮತ್ತು ಪ್ರಾದೇಶಿಕ  ಪತ್ರಿಕೆ ಸಂಪಾದಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಮನಗರದ ಮತ್ತಿಕೆರೆ ಜಯರಾಮ್  ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಡ್ಯದ ಶಿವಪ್ರಕಾಶ್ ಎಂ.ಎಸ್. ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ಕಬ್ಬೂರು ಮಾತನಾಡಿ, ಅಧ್ಯಕ್ಷ ಹುದ್ದೆ … Read more

ಕಳವು ಪ್ರಕರಣ: 24 ಗಂಟೆಯೊಳಗೆ ಆರೋಪಿತರ ಬಂಧನ – 86,030 ರೂ ನಗದು ಜಫ್ತಿ

theft-case-arrest-accused-within-day-davangere

ಸುದ್ದಿ360 ದಾವಣಗೆರೆ: ಕಳೆದ ರಾತ್ರಿ (11-07-2023) 12-45 ಗಂಟೆ ಸುಮಾರಿಗೆ ನಗರದ ಮಂಡಕ್ಕಿ ಭಟ್ಟಿ 01 ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮಿಲ್‌ನ ಬೀಗವನ್ನು ಹೊಡೆದು ಮೀಲ್‌ನಲ್ಲಿದ್ದ 86,030/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ  ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 24 ಗಂಟೆಯೊಳಗೆ ಪೊಲೀಸರು ಕಳುವಾದ ನಗದು ಸಮೇತ ಆರೋಪಿತರನ್ನು ಬಂಧಿಸಿದ್ದಾರೆ. ಪ್ರಕರಣದ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ . ಬಸರಗಿ … Read more

error: Content is protected !!