ಸೆ.23: ದೇವನಗರಿಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ – ದೇವನಗರಿ ಎಕ್ಸ್ಪೋ-23

ಸುದ್ದಿ360 ದಾವಣಗೆರೆ, ಸೆ. 21: ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ (Photographers welfare association)ವತಿಯಿಂದ ನಗರದ ಪಿಬಿ ರಸ್ತೆಯ ಕಮ್ಮವಾರಿ ಸಮುದಾಯ ಭವನದಲ್ಲಿ ಸೆ.23ರಂದು ವಿಶ್ವ ಛಾಯಾಗ್ರಾಹಣ ದಿನಾಚರಣೆ (World Photography Day) ಮತ್ತು ದೇವನಗರಿ ಎಕ್ಸ್ಪೋ-23 (Expo-23) ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು  ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ  ಮಾಹಿತಿ ನೀಡಿದರು. ಸೆ.23ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ … Read more

ದಾವಣಗೆರೆಯ ಪ್ರತಿಭೆ ಪೃಥ್ವಿ ಶಾಮನೂರ್‍ಗೆ  SIIMA (ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍) ದಿಂದ ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್ (best debut actor) ಪ್ರಶಸ್ತಿ

pruthvi shamanur-siima-davangere

ಸುದ್ದಿ360, ದಾವಣಗೆರೆ: ಕನ್ನಡ ಚಿತ್ರ ರಂಗ ಹಾಗೂ ಮಾಡೆಲಿಂಗ್‍ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿ ಏರಿಸಿಕೊಂಡಿರುವ  ಯುವ ಪ್ರತಿಭೆ, ಯುವ ನಾಯಕ ನಟ ಪೃಥ್ವಿ ಶಾಮನೂರು ಈಗ ಕನ್ನಡ ಚಿತ್ರರಂಗದಲ್ಲಿ  ‘ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ ನಿಂದ “ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್’ (best debut actor) ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸೆ.15ರ ಶುಕ್ರವಾರ ರಾತ್ರಿ ದುಬೈನಲ್ಲಿ ನಡೆದ  ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ (SIIMA AWARD) ನಿಂದ ಪೃಥ್ವಿ … Read more

ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು: ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು ಸೆ.16: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ (Visvesvaraya) ಗ್ರೇಟ್ ವಿಜನರಿ ಆಗಿದ್ದರು. ಭಾರತಕ್ಕೆ ಈಗಲೂ ಅವರ ಅಗತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಶುಕ್ರವಾರ ಎಫ್ ಕೆಸಿಸಿಐ ವತಿಯಿಂದ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸರ್ ಎಂ. ವಿ. ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಒಂದು ವಿಶೇಷವಾಗಿರುವ ದೇಶ ಭಾರತದಂತ ದೇಶ ಇನ್ನೊಂದಿಲ್ಲ. ಭಾರತವನ್ನು ಹುಡುಕಲು ಹೋಗಿ ಬೇರೆ ದೇಶ‌ವನ್ನು ಹುಡುಕಿದರು. ಆದರೆ … Read more

ನಾಡಿನ ಮಹತ್ವದ ಚಿಂತನೆಗಳ ಪ್ರೇರಕ ಶಕ್ತಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ: ಎಲ್ ಎಸ್ ಪ್ರಭುದೇವ್

ಸುದ್ದಿ360, ದಾವಣಗೆರೆ ಸೆ.16:  ಈ ನಾಡಿನ ಮಹತ್ವದ ಚಿಂತನೆಗಳ, ಯೋಜನೆಗಳ ಪ್ರೇರಕ ಶಕ್ತಿ ಯಾಗಿದ್ದವರು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಎಂದು ವಿಶ್ರಾಂತ ಕಾರ್ಯನಿರ್ವಾಹಕ ಅಧಿಕಾರಿ,ಇಂಜಿನಿಯರ್ ಎಲ್ ಎಸ್ ಪ್ರಭುದೇವ್ ತಿಳಿಸಿದರು. ಅವರು ಶುಕ್ರವಾರ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿಇಎ  ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತರತ್ನ  ಸರ್ ಎಂ ವಿಶ್ವೇಶ್ವರಯ್ಯ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡುತ್ತಾ … Read more

ಸೆ.17: ದಾವಣಗೆರೆ ಜಿಲ್ಲಾ ಗಂಗಾಮತಸ್ತರ (ಬೆಸ್ತರ) ಸಂಘ ದಿಂದ ಚಿಂತನ-ಮಂಥನ ಸಭೆ

ಸುದ್ದಿ360, ದಾವಣಗೆರೆ: ಸಮಾಜದ ಅಭಿವೃದ್ಧಿ ಮತ್ತು ಮೀನುಗಾರಿಕೆ ಬಗ್ಗೆ ಚಿಂತನ ಮಂಥನ ಸಭೆ ಮತ್ತು ಸಮಾಜದ ಮುಖಂಡರ ಸಭೆಯನ್ನು ಇದೆ ಸೆ.17ರ ಭಾನುವಾರ ಮಧ‍್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.  ನಗರದ ಎಂಸಿಸಿ ಎ ಬ್ಲಾಕ್, ಆಶ್ರಯ ಆಸ್ಪತ್ರೆ ಹತ್ತಿರ ಇರುವ ಗಂಗಾಮತಸ್ಥರ ( ಬೆಸ್ತರ ) ಸಂಘದ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ನಡೆಯಲಿದೆ. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಸಭೆಯ ನೇತೃತ್ವ ವಹಿಸಲಿದ್ದಾರೆ.  ಈ ಸಭೆಗೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಪಾದಾಧಿಕಾರಿಗಳು ಸದಸ್ಯರು ಮತ್ತು  ಜಿಲ್ಲೆಯ ಎಲ್ಲಾ … Read more

ಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿಗಾಗಿ 2ನೇ ದಿನಕ್ಕೆ ಕಾಲಿಟ್ಟ ಧರಣಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ

ಸುದ್ದಿ360, ಹುಬ್ಬಳ್ಳಿ ಸೆ.15: ನಗರದ ರಾಣಿ ಚನ್ನಮ್ಮ‌ ಮೈದಾನ(ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ  ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ. ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದ ಆರಂಭವಾದ ಪ್ರತಿಭಟನೆ ಅಹೋರಾತ್ರಿ ನಡೆಯಿತು. ಪಾಲಿಕೆಯ ಬಿಜೆಪಿ ಸದಸ್ಯರು ಆಯುಕ್ತರ ಕಚೇರಿಯಲ್ಲಿಯೇ ಮಲಗಿ ಪ್ರತಿಭಟಿಸಿದರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಶುಕ್ರವಾರ ಬೆಳಗ್ಗೆ ಬಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ … Read more

ಹೆಂಡತಿ, ಇಬ್ಬರು ಮಕ್ಕಳ ಹತ್ಯೆಗೈದ ತಂದೆ

ಸುದ್ದಿ360, ಚಾಮರಾಜನಗರ ಸೆ.15: ಪತಿಯೇ ತನ್ನ ಪತ್ನಿ ಹಾಗೂ ಇಬ್ಬರು ಪುಟಾಣಿ ಮಕ್ಕಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಗುಂಡ್ಲುಪೇಟೆ ತಾಲೂಕಿನ  ಬೊಮ್ಮನಹಳ್ಳಿ ಗ್ರಾಮದ   ಜಮೀನಿನ ಮನೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಈ ಬಗ್ಗೆ ಮೃತಳ ತಂದೆ ದೂರು ನೀಡಿದ್ದು, ಧನಂಜಯ ಎಂಬಾತ ತನ್ನ  ಹೆಂಡತಿ ಮೇಘ ಮತ್ತು ಇಬ್ಬರೂ ಹೆಣ್ಣು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಳ ತಂದೆ ಆರೋಪಿಸಿದ್ದಾರೆ.  ಧನಂಜಯ ಮತ್ತು ಮೇಘ ಅವರ ಮದುವೆಯಾಗಿ ಎಂಟು ವರ್ಷಗಳಾಗಿವೆ.  ಪ್ರಾರಂಭದ ದಿನಗಳಿಂದಲೂ … Read more

ಮಟ್ಕಾ ಜೂಜಾಟ -ಸಿ.ಇ.ಎನ್ ಅಪರಾಧ ಪೊಲೀಸರ ದಾಳಿ: 62,700/- ನಗದು ವಶ

ಸುದ್ದಿ360, ದಾವಣಗೆರೆ (Davangere): ಸೆ.14: ಖಚಿತ ಮಾಹಿತಿ ಮೇರೆಗೆ ಮಟ್ಕಾ ಚೂಜಾಟ (matka- gambling) ನಡೆಸುತ್ತಿರುವವರ ಮೇಲೆ ಸೆ.13ರ ಬುಧವಾರ  ದಾಳಿ (raid) ಮಾಡಿರುವ ಸಿ.ಇ.ಎನ್‍ ಅಪರಾಧ ಪೊಲೀಸರ (CEN Crime Police) ತಂಡ  3 ಜನರನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಮಟ್ಕಾ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 62,700/- ರೂ ನಗದು ಹಣ ಹಾಗೂ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ. ಚನ್ನಗಿರಿ (Channagiri) ತಾಲ್ಲೂಕ್ ಚಿರಡೋಣಿ ಗ್ರಾಮದ ಚಿರಡೋಣಿಯಿಂದ ಬಸವಾಪಟ್ಟಣ (Basavapattana) ಕಡೆಗೆ ಹೋಗುವ ರಸ್ತೆ … Read more

ಲಿಂಗೈಕ್ಯ ಶಿವಕುಮಾರ ಶ್ರೀಗಳವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ  ದಾವಣಗೆರೆ ತಾಲ್ಲೂಕು ವತಿಯಿಂದ ಭಕ್ತಿ ಸಮರ್ಪಣಾ ಪೂರ್ವಭಾವಿ ಸಭೆ

ಸುದ್ದಿ360  ದಾವಣಗೆರೆ ಸೆ :14: ಕರ್ನಾಟಕದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (shri shivakumara shivacharya mahaswami) 31ನೆಯ ಶ್ರದ್ಧಾಂಜಲಿ ಸಮಾರಂಭ ಇದೇ ಸೆ. 20ರಿಂದ 24ರವರೆಗೆ ಸಿರಿಗೆರೆಯಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಲಿದೆ. ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದಾಸೋಹಕ್ಕೆ ದಾವಣಗೆರೆ ತಾಲ್ಲೂಕಿನ ಭಕ್ತರಿಂದ ಅಕ್ಕಿ ಸಮರ್ಪಿಸಲಾಗುವುದು. ಆದುದರಿಂದ ಸೆ14ರ ಗುರುವಾರ ಸಾಯಂಕಾಲ 5:00 ಗಂಟೆಗೆ ಹದಡಿ ರಸ್ತೆಯ ಶಾಮನೂರು … Read more

error: Content is protected !!