ಹರಿಹರ ರೈಲ್ವೇ ಪ್ಲಾಟ್‍ಫಾರ್ಮ್‍ನಲ್ಲಿ ಅಪರಿಚಿತ ಶವ ಪತ್ತೆ

ದಾವಣಗೆರೆ: ಹರಿಹರ ರೈಲ್ವೇನಿಲ್ದಾಣದ ಪ್ಲಾಟ್‍ಫಾರ್ಮ್‍ ನಂ.1 ರ ಕಿ.ಮೀ. ನಂ 338/000-100 ರ ನಡುವೆ ಅಪರಿಚಿತ  ವ್ಯಕ್ತಿಯ ಶವ ಮೇ.29ರ ಬೆಳಗ್ಗೆ ಪತ್ತೆಯಾಗಿದ್ದು, ದಾವಣಗೆರೆ ರೈಲ್ವೇ ಪೊಲೀಸ್‍ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ 35-40 ವರ್ಷ ವಯಸ್ಸಿನ ಅಪರಿಚಿತ ಪುರುಷ ವ್ಯಕ್ತಿಯಾಗಿದ್ದು, 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಸುಮಾರು ಒಂದು ಇಂಚು ಉದ್ದನೆಯ ಬಿಳಿ ಮಿಶ್ರಿತ ಕಪ್ಪು ಬಣ್ಣದ ತಲೆ ಕೂದಲು, ಕಪ್ಪು ಬಣ್ಣದ ಮೀಸೆ ಹೊಂದಿದ್ದು, ಗಡ್ಡವನ್ನು … Read more

ವಿದೇಶದಲ್ಲಿ ಉದ್ಯೋಗವೇ ?ಇಲ್ಲೊಂದು ಕಿವಿಮಾತಿದೆ ನೋಡಿ. . .!

street play-davan college

ದವನ್‍ ಕಾಲೇಜು ವಿದ್ಯಾರ್ಥಿಗಳ ಬೀದಿನಾಟಕ ದಾವಣಗೆರೆ: ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ವಿಚಾರಿಸಿ ಯೋಚಿಸಿದಾಗ ವಿಷಯ ತಿಳಿವುದು. . .  ಹೀಗೆ ಬೋರ್ಗರೆದ ದನಿ ಇಂದು ನಗರದ ರಾಮ್‍ ಅಂಡ್‍ ಕೋ ಸರ್ಕಲ್‍ ನಲ್ಲಿ ನೆರೆದಿದ್ದವರ ಮನಕ್ಕೆ ನಾಟಿತು ಎಂದರೆ ತಪ್ಪಾಗಲಾರದು. ಹೌದು ನಗರದ ದವನ್‍ ಕಾಲೇಜು ವಿದ್ಯಾರ್ಥಿಗಳು ಇಂದು ರಾಮ್‍ ಅಂಡ್‍ ಕೋ ಸರ್ಕಲ್‍ನಲ್ಲಿ ಬೀದಿನಾಟಕ ಮಾಡುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಅದರಲ್ಲೂ ವಿದೇಶ ವ್ಯಾಮೋಹದಿಂದ ದೇಶ ತೊರೆಯಲು ಹಾತೊರೆಯುವವರ ಮನ ಮಿಡಿಯುವಂತೆ ಬೀದಿ … Read more

ಕಲ್ಲಡ್ಕ ಭಟ್ಟರ ಹೇಳಿಕೆ ಅವರ ಸಂಸ್ಕೃತಿಯನ್ನು ಸೂಚಿಸುತ್ತದೆ -ಸೈಯದ್ ಖಾಲಿದ್ ಅಹ್ಮದ್

kalladka-bhattas-statement-indicates-his-culture-sayyid-khalid-ahmad

ಸುದ್ದಿ360 ದಾವಣಗೆರೆ: ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಇಂಥ ಭವ್ಯವಾದ ಸಂಸ್ಕಾರವಿರುವ ದೇಶದಲ್ಲಿ ಇನ್ನೊಬ್ಬ ಹೆಣ್ಣುಮಕ್ಕಳ ಬಗ್ಗೆ ತುಚ್ಚಾವಾಗಿ ಮಾತನಾಡುವ ಕಲ್ಲಡ್ಕ ಭಟ್ ಅವರ ಹೇಳಿಕೆ ಅವರ ಸಂಸ್ಕೃತಿ ಅವರ ಸಂಸ್ಕಾರವನ್ನು ಸೂಚಿಸುತ್ತದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ … Read more

ಸ್ಕ್ವಾಯ್ ಕ್ರೀಡಾಪಟು ಶಶಾಂಕ್‍ಗೆ ಶಿಕ್ಷಣ ಸಚಿವರಿಂದ ಶುಭ ಹಾರೈಕೆ

education-minister-wishes-squash-athlete-shashank

ಸುದ್ದಿ360 ಶಿವಮೊಗ್ಗ: ಬೆಂಗಳೂರಿನ ಹೊಸಕೆರೆಹಳ್ಳಿ ಯಲ್ಲಿ ಇತ್ತೀಚೆಗೆ ನಡೆದ  ಸ್ಕ್ವಾಯ್ ಕ್ರೀಡೆಯ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ ವತಿಯಿಂದ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಮೊಗ್ಗದ ಡಿವಿಎಸ್‍ ಶಾಲೆಯ ವಿದ್ಯಾರ್ಥಿ ಶಶಾಂಕ್‍ಗೆ  ಶಿಕ್ಷಣ ಸಚಿವ ಮಧುಬಂಗಾರಪ್ಪ  ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಪದಕ ಗೆಲ್ಲುವಂತೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ತರಬೇತಿದಾರ ರಮೇಶ್ ಮತ್ತು ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರದ ಸಹ ಕಾರ್ಯದರ್ಶಿ ರಾಮಚಂದ್ರ ಖಜಾಂಚಿ ನಾಗರಾಜ್ ಉಪಸ್ಥಿತರಿದ್ದರು.

ತರಬೇತುದಾರ ಹೆಚ್.ದಾದಾಪೀರ್‌ಗೆ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿ: ಅಭಿನಂದನೆ

best-disciplined-referee-award-to-coach-h-dadapir-congratulations

ಸುದ್ದಿ360 ದಾವಣಗೆರೆ: ದಾವಣಗೆರೆಯ ಹಿರಿಯ ಕ್ರೀಡಾಪಟು ಅಂತರಾಷ್ಟ್ರೀಯ ತೀರ್ಪುಗಾರರಾದ ಏಕಲವ್ಯ ಪ್ರಶಸ್ತಿ ವಿಜೇತ ಹೆಚ್.ದಾದಾಪೀರ್‌ (H Dadapir) ಇವರು ನವದೆಹಲಿಯಲ್ಲಿಇತ್ತೀಚೆಗೆ ನಡೆದಕೇಲೋ ಇಂಡಿಯಾ ಪ್ಯಾರಾ ಪವರ್ ಲಿಫ್ಟಿಂಗ್‌ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿಗೆ (best disciplined referee award) ಭಾಜನರಾಗಿದ್ದಾರೆ. ಹೆಚ್.ದಾದಾಪೀರ್‌ ಅವರಿಗೆ ದಾವಣಗೆರೆ ಜಿಲ್ಲಾಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಗ್ರೂಪ್‌ ಆಫ್‌ ಐರನ್‌ ಗೇಮ್ಸ್ ಹಾಗೂ … Read more

ದಸರಾ: ಸರೋದ್‍ ದಿಗ್ಗಜರ ಬಳಿ ಅಧಿಕಾರಿ ಕೇಳಿದ್ದ ಕಮಿಷನ್ ಎಷ್ಟು. . .!?

dussehra-commission-asked-by-the-official-from-the-sarod-giant pt-taranath

ಸುದ್ದಿ360 ಅ.15: ವಿಶ್ವ ವಿಖ್ಯಾತ ದಸರಾ (Dussehra) ಮಹೋತ್ಸವದಲ್ಲಿ ಖ್ಯಾತ ಸರೋದ್ (sarodh) ವಾದಕ ಪಂ. ರಾಜೀವ್ ತಾರಾನಾಥ್ (Pt. Rajeev Taranath) ಅವರಿಗೆ ಕಾರ್ಯಕ್ರಮ ನೀಡಲು ದಸರಾ ಅಧಿಕಾರಿಗಳು ಕಮಿಷನ್ (commission) ಕೇಳಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‍ ವಾದಕ ಪಂ. ರಾಜೀವ ತಾರಾನಾಥ್‍ ಅವರನ್ನು ದಸರಾ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ  ನೀಡುವಂತೆ  ಆಹ್ವಾನಿಸಿರುವ ದಸರಾ ಅಧಿಕಾರಿಗಳು ಕಮಿಷನ್‍ ಬೇಡಿಕೆ ಇಟ್ಟಿರುವುದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ. ಕಾರ್ಯಕ್ರಮ ನೀಡುವಂತೆ ಪಂ. … Read more

ದಸರಾ ರಜೆ: ಏನಾದ್ರೂ ಕಲೀಬೇಕಲ್ಲಾ ಅನ್ನೋ ಮಕ್ಕಳಿಗೆ – ಚೆಸ್‍ ತರಬೇತಿ ಶಿಬಿರ

ಸುದ್ದಿ360 ದಾವಣಗೆರೆ (Davangere): ದಸರಾ ರಜೆ (Dussehra Holidays) ಶುರುವಾಯಿತು. ಮನೆಯಲ್ಲೇ ಉಳಿಯುವ ಮಕ್ಕಳನ್ನು ಒಂದಿಷ್ಟು ಯ್ಯಾಕ್ಟಿವ್‍ ಮಾಡೋಣ ಎಂದೆಣಿಸುವ ಪೋಷಕರಿಗೆ ಇಲ್ಲೊಂದು ಅವಕಾಶ ಇದೆ ನೋಡಿ. ಏನು ಅಂತೀರ ಮಕ್ಕಳ ಮನಸನ್ನು ಹಿಡಿದಿಡುವ, ಹೊಸ ಹೊಸ ಟಾಸ್ಕ್ ಗಳನ್ನು ಮಕ್ಕಳ ಮುಂದಿರಿಸುವ ಗೇಮ್‍ ಚದುರಂಗ (chess) ಇದೇ ಅ.15ರಿಂದ 15 ದಿನಗಳ ಚೆಸ್‍ ತರಬೇತಿ ಶಿಬಿರ ಆರಂಭಗೊಂಡಿದೆ. ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ  15 ದಿನಗಳ ಚೆಸ್‍ ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು … Read more

ಅ.12: ಕನಕ‌ಜಯಂತಿ ಆಚರಣೆ ಪೂರ್ವಬಾವಿ ಸಭೆ

ಸುದ್ದಿ360, ದಾವಣಗೆರೆ ಅ.11: ನವೆಂಬರ್‌ ನಲ್ಲಿ ನಡೆಯಲಿರುವ ದಾಸ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಅಂಗವಾಗಿ ಗುರುವಾರ ಅಕ್ಟೋಬರ್ 12 ರಂದು ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ  ಸಂಜೆ 5 ಗಂಟೆಗೆ ಸರಿಯಾಗಿ ಮಾಜಿ‌ ಕನಕ ಬ್ಯಾಂಕ್ ಅಧ್ಯಕ್ಷರು, ಕುರುಬಸಮಾಜದ ಹಿರಿಯ ಮುಖಂಡರು ಆದ ಪೈಲ್ವಾನ್ ‌ಹೆಚ್.ಜಿ.ಸಂಗಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿನಗರಸಭೆ ಸದಸ್ಯರಾದ ಎನ್.ಜೆ.ನಿಂಗಪ್ಪನವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ಸಮಾಜ‌ಭಾಂದವರು  ಹಾಗೂ ಸಮಾಜದ ವಿವಿದ ಸಂಘಸಂಸ್ಥೆಗಳ ಪಧಾದಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜಯಂತ್ಯೋತ್ಸವ ಅರ್ಥಪೂರ್ಣ ಆಚರಣೆಮಾಡಲು … Read more

ಸಾಮಾಜಿಕ ಜಾಲತಾಣದಲ್ಲಿ ಹೈವೋಲ್ಟೇಜ್‍ ಕ್ರಿಕೆಟ್‍ ಸಾಂಗ್‍ ‘ಗೆದ್ದು ಬಾ ಓ ಇಂಡಿಯಾ’

ಸುದ್ದಿ360 ದಾವಣಗೆರೆ, ಅ. 11: ವರ್ಲ್ಡ್‍ ಕಪ್‍ ಕ್ರಿಕೆಟ್‍ ಕಾವೇರುತ್ತಿರುವ ಈ ಹೊತ್ತಿನಲ್ಲಿ ದಾವಣಗೆರೆಯ ಸೃಜನಶೀಲ ತಂಡ “ಬ್ಲ್ಯಾಕ್‍ ಕ್ಯಾಟ್‍ ಕ್ರಿಯೇಟಿವ್ ಲ್ಯಾಬ್‍” ರಚಿಸಿರುವ  “ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಗೀತೆ ಸಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ. ನಗರದ ಪಿಬಿ ರಸ್ತೆಯಲ್ಲಿರುವ ಬಿಸಿಎಲ್‍ ಕ್ರಿಯೇಟಿವ್‍ ಏಜೆನ್ಸಿಯ ಮೂವಿ ಹಾಲ್‍ನಲ್ಲಿ ಇಂದು ಬ್ಲ್ಯಾಕ್‍ ಕ್ಯಾಟ್‍ ತಂಡ ಈ ಒಂದು ಗೀತೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದವರೊಂದಿಗೆ ಗೀತೆಯ ರಚನೆಯ ಕುರಿತು ಮಾಹಿತಿ ನೀಡಿದರು.  ಕನ್ನಡ, … Read more

ರೈತರಿಗೆ ನಿರಂತರ ಏಳು ತಾಸು ಕರೆಂಟ್ ಕೊಡದಿದ್ದರೆ, ವಿದ್ಯುತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ – ಬಸವರಾಜ ಬೊಮ್ಮಾಯಿ

electricity-office-will-be-locked-and-protested-basavaraja-bommai

ಸುದ್ದಿ360 ಚಿಕ್ಕಬಳ್ಳಾಪುರ (chikkaballapura) ಅ.11: ಸರ್ಕಾರ ರೈತರಿಗೆ ಏಳು ಗಂಟೆ ಥ್ರಿಫೆಸ್ ವಿದ್ಯುತ್ ನೀಡದಿದ್ದರೆ, ವಿದ್ಯುತ್ ‌ಕಚೇರಿಗಳಿಗೆ ಬೀಗ ಹಾಕಿ ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾಜಿ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರೆಂಟ್ ಪಡೆಯುವುದು ನಮ್ನ ಹಕ್ಕು, ಅಕ್ಕಿ ಪಡೆಯುವುದು ನಮ್ಮ ಹಕ್ಕು. … Read more

error: Content is protected !!