ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ: ಫೋಕ್ಸೊ ಕೇಸ್ ದಾಖಲು – ಷಡ್ಯಂತ್ರ?

ಸುದ್ದಿ360 ಚಿತ್ರದುರ್ಗ, ಆ.27: ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಪತಿ ಶ್ರೀ ಮುರುಘಾ ಶರಣರು ಸೇರಿದಂತೆ ಐದು ಜನರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಾಗಿದ್ದು, ಮೈಸೂರು ಒಡನಾಡಿ ಸಂಸ್ಥೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮಠವೇ ನಡೆಸುತ್ತಿರುವ ಪ್ರೌಢಶಾಲೆಯ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದ್ದು, … Read more

ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮಾರಕಾಸ್ತ್ರ ಬೀಸಿ ಕೊಲೆ

ಸುದ್ದಿ360 ಬೆಳಗಾವಿ, ಆ.26: ಬೈಕ್ ಮೇಲೆ ಹೋಗುತ್ತಿದ್ದವನ ಕತ್ತು ಕತ್ತರಿಸಿ ಕೊಲೆ ಮಾಡಿರುವ ಭೀಕರ ಘಟನೆ ಶುಕ್ರವಾರ ವರದಿಯಾಗಿದೆ. ಸವದತ್ತಿ ತಾಲ್ಲೂಕಿನ ಮುನ್ನವಳ್ಳಿ ಗ್ರಾಮದ ಗದಗಯ್ಯ ಹಿರೇಮಠ (40) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಗದಗಯ್ಯ ತಮ್ಮ ಬೈಕ್ ಮೇಲೆ ಹಲಗಾ ಮಾರ್ಗವಾಗಿ ಹೊರಟಿದ್ದ ವೇಳೆ ಹಿಂಬದಿಯಿಂದ ಬೈಕ್ ಮೇಲೆ ಬಂದ  ಆರೋಪಿಗಳು ಈ ದುಶ್ಕೃತ್ಯ ಎಸಗಿದ್ದಾರೆ. ಬೈಕ್ ಚಲನೆಯಲ್ಲಿದ್ದಾಗಲೇ ಗದಗಯ್ಯನ ಕುತ್ತಿಗೆಯ ಭಾಗಕ್ಕೆ ಮಾರಕಾಸ್ತ್ರ ಬೀಸಿದ್ದು, ಕುತ್ತಿಗೆಯ ಬಹುಪಾಲು ತುಂಡರಿಸಿದೆ. ಇದರಿಂದ ಬೈಕ್ ಸಮೇತ ಬಿದ್ದ ಗದಗಯ್ಯ ಸ್ಥಳದಲ್ಲೇ … Read more

ಮಧ್ಯ ಕರ್ನಾಟಕ ಭಾಗದಲ್ಲೇ ಮೊದಲ ಬಾರಿ ಬೃಹತ್ ಅಂತರಾಷ್ಟ್ರೀಯ ಶಿಕ್ಷಣ ಮೇಳ

ಹೊರದೇಶಗಳಲ್ಲಿ ಉನ್ನತ ಶಿಕ್ಷಣ ಸೇರ ಬಯಸುವ  ವಿದ್ಯಾರ್ಥಿಗಳಿಗೊಂದು ಸುವರ್ಣ ಅವಕಾಶ ಸುದ್ದಿ360 ದಾವಣಗೆರೆ, ಆ.26: ನಗರದ ಜಿ ಎಂ ತಾಂತ್ರಿಕ ಮಹಾವಿದ್ಯಾಲಯವು ಇದೇ ಮೊದಲ ಬಾರಿ ಕೆಸಿ ಓವರ್ಸಿಸ್ ಎಜುಕೇಶನ್ ಚಿತ್ರದುರ್ಗ ಇವರ ಸಹಕಾರ ಮತ್ತು ಸಹಯೋಗದಲ್ಲಿ ಬೃಹತ್ ಅಂತರಾಷ್ಟ್ರೀಯ ಶಿಕ್ಷಣ ಮೇಳವನ್ನು ಆಯೋಜಿಸಿದ್ದು, ಬರುವ ಸೆಪ್ಟೆಂಬರ್ 3ರಂದು ಜಿಎಂಐಟಿ ಕೇಂದ್ರ ಗ್ರಂಥಾಲಯದಲ್ಲಿ ನೆರವೇರಲಿದೆ. ಬೆಳಗ್ಗೆ 9:00ಯಿಂದ ಸಂಜೆ 5:00 ವರೆಗೆ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕೆಸಿ ಓವರ್ಸಿಸ್ ಎಜುಕೇಶನ್ ಸಂಯೋಜಕರುಗಳಾದ … Read more

ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ‘ತುಂಗಾ’ ಇನ್ನು ನೆನಪು ಮಾತ್ರ – ಸರಕಾರಿ ಗೌರವದೊಂದಿಗೆ ವಿದಾಯ

650 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಹಾಜರಾಗಿದ್ದ ‘ತುಂಗಾ’ ಸುದ್ದಿ 360, ದಾವಣಗೆರೆ ಆ.26: ಜಿಲ್ಲಾ ಪೊಲೀಸ್ ಇಲಾಖೆಗೆ ಇಂದು ತುಂಬಲಾರದ ನಷ್ಟ ಎಂದರೆ ತಪ್ಪಾಗದು. ಪೊಲೀಸ್ ಕುಟುಂಬದ ಕಣ್ಮಣಿ, ಅಧಿಕಾರಿಗಳು, ಸಿಬ್ಬಂದಿಯ ಅಚ್ಚುಮೆಚ್ಚಿನ ಶ್ವಾನ ‘ತುಂಗಾ’ ಇಂದು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ. ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದಲ್ಲಿ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸಿರುವ ತುಂಗಾ (ಡಾಬರ್‌ಮನ್ ತಳಿಯ ಶ್ವಾನ), ಹತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನದೇ ಆದ ಸೇವೆ ಸಲ್ಲಿಸಿ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗುವ ಜೊತೆಗೆ … Read more

ಪರಿಸರ ಸ್ನೇಹಿ ಗಣಪತಿ ಮಾರಾಟ  ಪ್ರತಿಷ್ಠಾಪನೆ – ನಿಯಮ ಉಲ್ಲಂಘಿಸಿದರೆ ದಂಡ ಶತಸಿದ್ಧ – ಪರಿಸರ ಕಾಳಜಿಗೆ ಮನವಿ

ಸುದ್ದಿ360 ದಾವಣಗೆರೆ, ಆ.26:  ಗಣೇಶ ಚತುರ್ಥಿಯನ್ನು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿಯಾಗಿ ಆಚರಿಸಲು ಸರ್ಕಾರದ ನಿರ್ದೇಶನವಿದ್ದು, ಗಣೇಶ ಮೂರ್ತಿ ತಯಾರಕರು ಹಾಗೂ ಸಾರ್ವಜನಿಕರು ಆಗಸ್ಟ್ 30 ರಂದು ಆಚರಿಸಲಿರುವ ಗಣೇಶ ಚತುರ್ಥಿಯನ್ನು ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಗಣೇಶ ಮೂರ್ತಿಗಳನ್ನು ಜೇಡಿ ಮಣ್ಣಿನಿಂದ ತಯಾರಿಸಿ, ಬಣ್ಣರಹಿತ ಅಥವಾ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುಬೇಕು. ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ಮಹಾನಗರಪಾಲಿಕೆ ಕಾಯ್ದೆ ರೀತ್ಯಾ … Read more

ಮೆರಿಟ್ ನೊಂದಿಗೆ ಕೌಶಲ್ಯ ಬೆಳೆಸಿಕೊಳ್ಳಿ- ವಿದ್ಯಾರ್ಥಿಗಳಿಗೆ ಡಾ.ಕೆ. ಶಿವಶಂಕರ್ ಸಲಹೆ

ಸುದ್ದಿ360 ದಾವಣಗೆರೆ, ಆ.26:  ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೆರಿಟ್ ಹೊಂದುವುದರ ಜೊತೆಗೆ ವಿಶೇಷ ಕೌಶಲ್ಯಗಳನ್ನು ಹೊಂದುವುದು ಇಂದು ಅತ್ಯಗತ್ಯವಾಗಿದ್ದು ಆ ನಿಟ್ಟಿನಲ್ಲಿ ಮುಂದುವರೆಯುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ. ಶಿವಶಂಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಎಆರ್‌ಜಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇಂದು ನಡೆದ ಎಆರ್‌ಜಿ ವೈಭವ 2022 ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಉದ್ಯೋಗ ನೀಡುವಾಗ ಕೇವಲ ಮೆರಿಟ್ ನೋಡುತ್ತಿದ್ದರು. ಆದರೆ ಇಂದು, ಉತ್ತಮ ಅಂಕಗಳ ಜತೆ ವೃತ್ತಿಗೆ ಅಗತ್ಯವಿರುವ ಕೌಶಲ್ಯ ಹೊಂದಿದವರನ್ನು ಉದ್ಯೋಗಕ್ಕೆ ಪರಿಗಣಿಸಲಾಗುತ್ತಿದೆ … Read more

ಅಪರಾಧ ಪ್ರಕರಣ ಪತ್ತೆಯಲ್ಲಿ ನೆರವಾಗುತ್ತಿದ್ದ ‘ತುಂಗಾ’ಕ್ಕೆ ಜಿಲ್ಲಾ ಪೊಲೀಸ್ ನಿಂದ ಭಾವಪೂರ್ಣ ಶ್ರದ್ಧಾಂಜಲಿ

ಸುದ್ದಿ360 ದಾವಣಗೆರೆ, ಆ.26:  ಹಲವು ಅಪರಾಧ ಪ್ರಕರಣ ಪತ್ತೆಯಲ್ಲಿ ಪೊಲೀಸರಿಗೆ ನೆರವಾಗುವ ಮೂಲಕ ಪ್ರಮುಖ ಪಾತ್ರ ನಿರ್ವಹಿಸಿದ್ದ ಶ್ವಾನ ದಳದ ತುಂಗಾ ಇಂದು ವಿಧಿವಶವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತುಂಗಾ ನಿಧನಕ್ಕೆ ಜಿಲ್ಲಾ ಪೊಲೀಸ್ ನಲ್ಲಿ ದುಃಖ ಮಡುಗಟ್ಟಿದ್ದು, ಅಗಲಿದ ತುಂಗಾಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಾವಣಗೆರೆ ಜಿಲ್ಲಾ  ಅಪರಾಧ ವಿಭಾಗದಲ್ಲಿ ತುಂಗಾ ಶ್ವಾನವು ಇಲಾಖೆಗೆ ತನ್ನದೇ ಆದ ಅಮೂಲ್ಯ ಸೇವೆ ಸಲ್ಲಿಸಿತ್ತು.

ಬಸವತತ್ವ ಆಚರಣೆಯಿಂದ ಸುಖ-ಶಾಂತಿ: ಬಸವಪ್ರಭು ಶ್ರೀ

ಸುದ್ದಿ360 ದಾವಣಗೆರೆ, ಆ.26: ಬಸವತತ್ವ ಆಚರಣೆಯಿಂದ  ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. ದಾವಣಗೆರೆ ವಿರಕ್ತಮಠದಲ್ಲಿ ನೆಡೆದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಬಸವತತ್ವವನ್ನು ಪಾಲಿಸುವ ವ್ಯಕ್ತಿಯು ಶಾಂತಿಯುತವಾಗಿರುತ್ತಾನೆ ಕಾರಣ ಬಸವತತ್ವವು ಮಾನವೀಯತೆಯನ್ನು ಭೋದಿಸುತ್ತದೆ ಮಾನವೀಯತೆ ಇದ್ದಲ್ಲಿ ಶಾಂತಿ , ಪ್ರೇಮ , ಸಮಾನತೆಗಳು ನೆಲೆಸುತ್ತದೆ  ಹಾಗಾಗಿ ಎಲ್ಲರೂ ಬಸವತತ್ವವನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕು ಆಗ ಮಾತ್ರ ಜಗತ್ತಿಗೆ ಶಾಂತಿ ನೆಲೆಸುತ್ತದೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮೇಶ್ವರ, … Read more

ಬಿಜೆಪಿ ವಿರುದ್ಧ ಅಭಿಯಾನ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಸುದ್ದಿ360 ಹುಬ್ಬಳ್ಳಿ, ಆ.26: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿ ನಿರ್ಣಯ ತೆಗೆದುಕೊಳ್ಳಲು ತಿಳಿಸಿದೆ. ಅಗಸ್ಟ್ 29 ರಂದು ನಿರ್ಣಯ ತಿಳಿಸಲು ಸೂಚಿಸಿದೆ. ಆದರೆ ಅನುಮತಿ ನೀಡಲು ಸಮಿತಿಯ ರಚನೆ ಅವಶ್ಯಕತೆ ಇರಲಿಲ್ಲ. ಆದರೆ ವಿನಾಕಾರಣ ಕಾಲಹರಣ ಮಾಡಲು ಈ ರೀತಿಯ ನಾಟಕವನ್ನು ಪಾಲಿಕೆ ಮಾಡುತ್ತಿದೆ ಎಂದು  ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಆರೋಪಿಸಿದರು. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಜೆಪಿ ಅವಕಾಶ … Read more

15 ಸೆಕೆಂಡ್ ಗಳಲ್ಲಿ ಧರೆಗುರುಳಲಿವೆ 40 ಅಂತಸ್ತಿನ ಸೂಪರ್‌ಟೆಕ್ ಅವಳಿ ಗೋಪುರಗಳು !!!

ಧರೆಗುರುಳಲು ಕ್ಷಣಗಣನೆಯಲ್ಲಿರುವ ಸೂಪರ್‌ಟೆಕ್ ಅವಳಿ ಗೋಪುರಗಳು ಸುದ್ದಿ360 ನೋಯ್ಡ, ಆ.26: ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತೀರಿ. ಅಂತೆಯೇ 2004ರಲ್ಲಿ ಪ್ರಾರಂಭವಾದ ಯೋಜನೆಯಿಂದ ಹಲವರ ಕನಸಿನ ಮನೆಯಾಗಬೇಕಿದ್ದ ವಸತಿ ಸಮುಚ್ಛಯ ಇದೀಗ ನೆಲಸಮಗೊಳ್ಳಲು ಕ್ಷಣಗಣನೆಯಲ್ಲಿದೆ. ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 93ರಲ್ಲಿನ ಅಪೆಕ್ಸ್ ಮತ್ತು ಸಿಯಾನ್ ಹೆಸರಿನ ಸೂಪರ್‌ಟೆಕ್ ಅವಳಿ ಗೋಪುರಗಳ ಅಸ್ತಿತ್ವ ಆಗಸ್ಟ್ 28 ರ ಮಧ್ಯಾಹ್ನ 2.30ರ ವರೆಗೆ ಮಾತ್ರ ನಂತರದ 15 ಸೆಕೆಂಡ್ ಗಳಲ್ಲಿ … Read more

error: Content is protected !!