ಸೆ.17: ದಾವಣಗೆರೆ ಜಿಲ್ಲಾ ಗಂಗಾಮತಸ್ತರ (ಬೆಸ್ತರ) ಸಂಘ ದಿಂದ ಚಿಂತನ-ಮಂಥನ ಸಭೆ

ಸುದ್ದಿ360, ದಾವಣಗೆರೆ: ಸಮಾಜದ ಅಭಿವೃದ್ಧಿ ಮತ್ತು ಮೀನುಗಾರಿಕೆ ಬಗ್ಗೆ ಚಿಂತನ ಮಂಥನ ಸಭೆ ಮತ್ತು ಸಮಾಜದ ಮುಖಂಡರ ಸಭೆಯನ್ನು ಇದೆ ಸೆ.17ರ ಭಾನುವಾರ ಮಧ‍್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

 ನಗರದ ಎಂಸಿಸಿ ಎ ಬ್ಲಾಕ್, ಆಶ್ರಯ ಆಸ್ಪತ್ರೆ ಹತ್ತಿರ ಇರುವ ಗಂಗಾಮತಸ್ಥರ ( ಬೆಸ್ತರ ) ಸಂಘದ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ನಡೆಯಲಿದೆ. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಸಭೆಯ ನೇತೃತ್ವ ವಹಿಸಲಿದ್ದಾರೆ.  ಈ ಸಭೆಗೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಪಾದಾಧಿಕಾರಿಗಳು ಸದಸ್ಯರು ಮತ್ತು  ಜಿಲ್ಲೆಯ ಎಲ್ಲಾ ಕುಲಬಾಂಧವರು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ದಾವಣಗೆರೆ ಜಿಲ್ಲಾಗಂಗಾಮತಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಉಮೇಶ್‍ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!