ಅ.4ಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ವತಿಯಿಂದ ‘ಜನಾಗ್ರಹ ಜನಾಂದೋಲನ ಚಳುವಳಿ’ ಪೋಸ್ಟರ್ ಬಿಡುಗಡೆ

protest-dvg

ಸುದ್ದಿ360 ದಾವಣಗೆರೆ ಅ.1: ಚುನಾವಣಾ ಸಂದರ್ಭದಲ್ಲಿ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಅಕ್ಟೋಬರ್ 4 ರ ಬುಧವಾರದಂದು ಸರ್ಕಾರಕ್ಕೆ ಒತ್ತಾಯಿಸುವ ಜನಾಗ್ರಹ  ಜನಾಂದೋಲನದ ಚಳುವಳಿಯ ಪೋಸ್ಟರ್ ಅನ್ನು ಸಿಪಿಐ ಹಿರಿಯ ಮುಖಂಡ ಹಾಗೂ ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಕಾಮ್ರೆಡ್ ಆನಂದರಾಜ್ ರವರು ಬಿಡುಗಡೆ ಮಾಡುವರು ಎಂದು ದಾವಣಗೆರೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಆವರಗೆರೆ ಚಂದ್ರು ತಿಳಿಸಿದ್ದಾರೆ.

2023 ರ ಕರ್ನಾಟಕ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೊಟ್ಟ ಭರವಸೆಗಳನ್ನು ಈಡೇರಿಸುವುದಾಗಿ ಜನತೆಗೆ ಹಾಗೂ ಎಲ್ಲಾ ವರ್ಗದ ದುಡಿಯುವ ಜನರಿಗೆ ಆಶಾದಾಯಕ ಭರವಸೆಗಳನ್ನು ನೀಡಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರ ನಡೆಸುತ್ತಿದೆ, ಆದ್ದರಿಂದ ರಾಜ್ಯದ ಜನತೆಗೆ ಮತ್ತು ಕಾರ್ಮಿಕರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕೆಂದು ಚಳುವಳಿ ಕುರಿತು ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗುವುದು.

ಅಂದು ಬೆಳಿಗ್ಗೆ 11-30 ಗಂಟೆಗೆ ದಾವಣಗೆರೆ ಜಯದೇವ ಸರ್ಕಲ್ ಬಳಿ ನಡೆಯುವ ಪೋಸ್ಟರ್ ಬಿಡುಗಡೆ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು ಆಗಮಿಸುವಂತೆ ಪಕ್ಷದ ಜಿಲ್ಲಾ ಮಂಡಳಿ ಸಹಕಾರ್ಯದರ್ಶಿಗಳಾದ ಕಾಮ್ರೆಡ್ ಹೆಚ್ ಜಿ ಉಮೇಶ್, ಕಾಮ್ರೆಡ್ ಅವರಗೆರೆ ವಾಸು, ಮುಖಂಡರುಗಳಾದ ಎಂ ಬಿ ಶಾರದಮ್ಮ ,ಟಿ ಎಸ್ ನಾಗರಾಜ್, ಮಹಮ್ಮದ್ ಭಾಷಾ ಜಗಳೂರು, ಟಿ ಹೆಚ್ ನಾಗರಾಜ ಹರಿಹರ, ಮಹಮ್ಮದ್ ರಫೀಕ್ ಚನ್ನಗಿರಿ, ಐರಣಿ ಚಂದ್ರು ಇವರು ಪಕ್ಷದ ಪರವಾಗಿ ಕೋರಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!