ಮಾ.9: ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್‍ನಿಂದ ಸಾಂಕೇತಿಕ ಬಂದ್

ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ ಬಂದ್‍ಗೆ ಕರೆ ಸುದ್ದಿ360 ದಾವಣಗೆರೆ, ಮಾ.08: ರಾಜ್ಯಕ್ಕೆ ಕರಪ್ಷನ್ ಕ್ಯಾಪಿಟಲ್ ಕರ್ನಾಟಕ ಕಳಂಕ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11ರವರೆಗೆ 2 ಗಂಟೆಗಳ ಕಾಲ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಸಾರ್ವಜನಿಕರು ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ತಿಳಿಸಿದರು. ಈ ಕುರಿತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ … Read more

ಮಹಿಳೆ – ಬಣ್ಣ – ಬದುಕು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹಬ್ಬದ ನಿಮಿತ್ತ ಈ ಒಂದು ಲೇಖನ ಮಹಿಳೆಯರನ್ನು ಗೌರವಿಸುವ ಹಾಗೂ ಪ್ರಕೃತಿಯನ್ನು ಜೋಪಾನ ಮಾಡುವ ಪ್ರತಿಯೊಬ್ಬರ ಪರವಾಗಿ… – ಕೂಡ್ಲಿ ಸೋಮಶೇಖರ್ ಬದುಕು ವರ್ಣಮಯವಾಗಿರಬೇಕು ಎಂಬುದು ಎಲ್ಲರ ಆಶಯ, ಹಾರೈಕೆ ಕೂಡ. ವರ್ಣಮಯವಾದ ಈ ಪ್ರಕೃತಿಯಲ್ಲಿ ಮಾನವ ಜೀವಿ ಒಂದು ಸಣ್ಣ ತುಣುಕು ಮಾತ್ರವೇ ಎಂಬುದನ್ನು ಅರಿತರೆ ಬಹುಶಃ ಮಾನವ ತನ್ನ ಉದ್ಧಾರದೊಂದಿಗೆ ಸಕಲ ಜೀವರಾಶಿಯ ಉದ್ಧಾರಕ್ಕೂ ಮುಂದಾಗುತ್ತಾನೆ. ತಾನು ವಾಸಿಸುವ ಪ್ರಕೃತಿಯ ಮೇಲೆ ಅನಾದಿಕಾಲದಿಂದಲೂ ದೌರ್ಜನ್ಯ ವೆಸಗುತ್ತ ಬಂದ … Read more

ಚನ್ನಗಿರಿಯಲ್ಲಿ ಭವ್ಯ ಮೆರವಣಿಗೆ || ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ ಇದ್ದೆ- ಪಕ್ಷದಿಂದ ಉಚ್ಚಾಟನೆಗೊಂಡಿದ್ದೇನೆ ಎಂದ ಮಾಡಾಳು ವಿರೂಪಾಕ್ಷಪ್ಪ

ಸುದ್ದಿ360 ದಾವಣಗೆರೆ ಮಾ. 7: ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪರನ್ನು ಅಭಿಮಾನಿಗಳು ಸಮರವೀರರಂತೆ ಬಿಂಬಿಸಿ ಭವ್ಯ ಸ್ವಾಗತ  ಮಾಡಿದ್ದಾರೆ. ಕೆಎಸ್ ಡಿ ಎಲ್ ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿನ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ  ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ನವರು ತಮ್ಮ ಜಾಮೀನು ಅರ್ಜಿ ಮಂಜೂರು ಆದ ಕೆಲವೇ ಗಂಟೆಗಳಲ್ಲಿ ಚನ್ನಗಿರಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ … Read more

ಎಷ್ಟು ದುಡ್ಡು ಕೊಟ್ಟರೆ ನಿಮ್ಮಹಣದ ದಾಹ ತೀರುತ್ತದೆ? – ಬಿಜೆಪಿಗೆ ರಣದೀಪ್ ಸಿಂಗ್ ಸುರ್ಜಿವಾಲ ತಾಕೀತು

ಬಿಟ್ಟರೆ ಬಿಜೆಪಿಯವರು ಕರ್ನಾಟಕವನ್ನೇ ಮಾರುತ್ತಾರೆ! – ಸುರ್ಜಿವಾಲ ಸುದ್ದಿ360 ದಾವಣಗೆರೆ ಮಾ.6: ‘ಮುಖ್ಯಮಂತ್ರಿ ಬೊಮ್ಮಾಯಿಯವರೇ, ನಳೀನ್ ಕುಮಾರ್ ಕಟೀಲ್ ಹಾಗೂ ಜೆ.ಪಿ. ನಡ್ಡಾ ಅವರೇ ನಿಮ್ಮ ಬಿಜೆಪಿಗೆ ಹಣದ ದಾಹ ಎಷ್ಟಿದೆ ಎಂಬುದನ್ನು ಹೇಳಿ. ಎಷ್ಟು ದುಡ್ಡು ಕೊಟ್ಟರೆ ನಿಮ್ಮ ದಾಹ ತೀರುತ್ತದೆ ಎಂದು ತಿಳಿಸಿಬಿಡಿ. ಕರ್ನಾಟಕದ ಜನತೆಯೊಂದಿಗೆ ನಾವೆಲ್ಲರೂ ಸೇರಿಕೊಂಡು ದೇಣಿಗೆ ಸಂಗ್ರಹಿಸಿ ನಿಮಗೆ ಹಣ ಹೊಂದಿಸಿಕೊಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಬಿಜೆಪಿಯ ಭ್ರಷ್ಟಾಚಾರ ಕುರಿತು ಗುಡುಗಿದ್ದಾರೆ. … Read more

ದಲಿತರ ಸಾಗುವಳಿಯಲ್ಲಿದ್ದ ಜಮೀನು ಸ್ಮಶಾನಕ್ಕೆ : ಬಹುಜನ ಸಮಾಜ ಪಾರ್ಟಿ ಖಂಡನೆ

ಸುದ್ದಿ360 ದಾವಣಗೆರೆ ಮಾ.6: ಜಿಲ್ಲೆಯ ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ದಲಿತರು ಸಾಗುವಳಿ ಮಾಡಿರುವ ಸರ್ಕಾರಿ ಭೂಮಿಯನ್ನು ಉದ್ದೇಶಪೂರ್ವಕವಾಗಿ ಸ್ಮಶಾನಕ್ಕೆ ಸೇರಿಸಲು ಹೊರಟಿರುವ ಕುತಂತ್ರವನ್ನು ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಾಲಕಟ್ಟೆ ಗ್ರಾಮದಲ್ಲಿ 15 ಎಕರೆ 30 ಸೆಂಟ್ಸ್ ಗೋಮಾಳ ಜಮೀನು ಇದ್ದು ಇದರಲ್ಲಿ 6 ಎಕರೆ ಜಮೀನನ್ನು 1 ಎಕರೆ 30 ಸೆಂಟ್ಸ್ ನಂತೆ 5 ಜನ ದಲಿತರು … Read more

ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಮಾನಹಾನಿಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕೆ.ಎಸ್. ಬಸವರಾಜ್ ವಿರುದ್ಧ ಕ್ರಮಕ್ಕೆ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘ ಒತ್ತಾಯ ಸುದ್ದಿ360 ದಾವಣಗೆರೆ ಮಾ.06: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಭಾವಚಿತ್ರವನ್ನು ಕೆ.ಎಸ್. ಬಸವರಾಜ್ (ಬಸವಂತಪ್ಪ) ಇವರು ಅಶ್ಲೀಲವಾಗಿ ಮಾರ್ಪಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ … Read more

ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಹುಬ್ಬಳ್ಳಿ, ಮಾ. 06:  ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಒಂದೆರಡಲ್ಲ. ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭ್ರಷ್ಟಾಚಾರದ ವಿರುದ್ಧ  ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಸಂಬಂಧಿಸಿದಂತೆ ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಪ್ರತಿಭಟನೆ, ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆಯಬಹುದೆಂದು ಬಂದ್ ಗೆ ಕರೆ ನೀಡಿದ್ದಾರೆ. ಅವರಿಗೆ ಯಾವ ಪ್ರತಿಕ್ರಿಯೆ ದೊರೆಯಿವುದಿಲ್ಲ ಎಂದರು.  ಕಾಂಗ್ರೆಸ್ ಭ್ರಷ್ಟಾಚಾರದ ಕೂಪ : ಕಾಂಗ್ರೆಸ್ ಭ್ರಷ್ಟಾಚಾರದ … Read more

ಬಸವ ತತ್ವ ಗುನುಗುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ – ಮೇಯರ್ ಗಿರಿ ನಮ್ಮದು – ನಮ್ಮದು ಎನ್ನುತ್ತಿರುವ ಉಭಯ ಪಕ್ಷಗಳು

ಇವನಾರವ ಇವನಾರವ  ಎಂದೆನಿಸದಿರಯ್ಯಾ – ಇವ ನಮ್ಮವ ಇವ ನಮ್ಮವ ಎಂದೆನಿಸಿರಯ್ಯಾ. . . ಸುದ್ದಿ360 ದಾವಣಗೆರೆ ಮಾ. 4: ದಾವಣಗೆರೆ ಮಹಾನಗರ ಪಾಲಿಕೆಗೆ ಇಂದು ನಡೆದ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಹೈಡ್ರಾಮವೇ ನಡೆಯಿತು. ಈ ಸಂದರ್ಭದಲ್ಲಿ ನಡೆದ ಘಟನೆಗಳು ಮತ್ತು ಅಂತಿಮ ಫಲಿತಾಂಶದಿಂದ ಜನಸಾಮಾನ್ಯರಲ್ಲಿ ಮೂಡಿದ ಪ್ರಶ್ನೆ ಎಂದರೆ ಮೇಯರ್ ಸ್ಥಾನ ಈಗ ‘ಕೈ’ ನಲ್ಲಿದೆಯೋ ಅಥವಾ ಆಪರೇಷನ್ ಕಮಲದ ತೆಕ್ಕೆಗೆ ಜಾರಿತೋ ಎಂಬುದಾಗಿತ್ತು. ಫಲಿತಾಂಶದ ನಂತರ ಕೈ ಮತ್ತು ಕಮಲ ಪಾಳಯದ ಸಾಮಾಜಿಕ ಜಾಲತಾಣದಲ್ಲಿ … Read more

ಡಬಲ್ ಎಂಜಿನ್ ಸರಕಾರವಲ್ಲ ಬೇಕಿರುವುದು ಹೊಸ ಎಂಜಿನ್ ಸರಕಾರ: ಕೇಜ್ರಿವಾಲ್

ಕರ್ನಾಟಕ ರಾಜ್ಯವನ್ನು ಭ್ರಷ್ಟಾಚಾರಮುಕ್ತಗೊಳಿಸಲು ಎಎಪಿಗೆ ಅಧಿಕಾರ ನೀಡುವಂತೆ ಕೇಜ್ರಿವಾಲ್ ಮನವಿ ಸುದ್ದಿ360 ದಾವಣಗೆರೆ, ಮಾ.4: ಪರ್ಸಂಟೇಜ್ ಪಕ್ಷಗಳನ್ನು ಬದಿಗಿರಿಸಿ ಒಂದು ಬಾರಿ ಆಮ್ ಆದ್ಮಿ ಪಕ್ಷದ ಹೊಸ ಎಂಜಿನ್ ಆಡಳಿತಕ್ಕೆ ಅವಕಾಶ ನೀಡುವಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಹೊಸದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜನತೆಯಲ್ಲಿ ಮನವಿ ಮಾಡಿದರು. ಕರ್ನಾಟಕದಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುವ ನಿಮಿತ್ತ ಆಮ್ ಆದ್ಮಿ ಪಕ್ಷ, ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶವನ್ನು ಉದ್ಘಾಟಿಸಿ … Read more

error: Content is protected !!