ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡಲ್ಲಿ ವ್ಯಕ್ತಿ ವಿಶ್ವಮಾನವನಾಗುತ್ತಾನೆ: ಬಸವಪ್ರಭು ಶ್ರೀ

ಸುದ್ದಿ360 ದಾವಣಗೆರೆ, ಆ.23: ಪ್ರತಿಯೊಬ್ಬರೂ ವಚನಗಳನ್ನು ಓದಬೇಕು, ಕಲಿಯಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿ ವಿಶ್ವಮಾನವನಾಗುತ್ತಾನೆ ಎಂಬುದಾಗಿ  ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ದೊಡ್ಡಪೇಟೆಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದಲ್ಲಿ ಇಂದು ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ವಚನ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಮಾಜದಲ್ಲಿ ವೈದ್ಯರು, ಎಂಜಿನಿಯರ್, ಬುದ್ಧಿವಂತರು, ವಿದ್ಯಾವಂತರು, ವಿಜ್ಞಾನಿಗಳು ಸಿಗುತ್ತಾರೆ. ಆದರೆ ಸಾತ್ವಿಕರು ಸಿಗುವುದಿಲ್ಲ. ನಮ್ಮ … Read more

ಮನುಷ್ಯರಲ್ಲಿ ದೇವರನ್ನು ಕಾಣುವ ಮೂಲಕ ಹಬ್ಬಗಳನ್ನು ವೈಚಾರಿಕವಾಗಿ ಆಚರಿಸಲು ಬಸವಪ್ರಭುಶ್ರೀ ಕರೆ

ಸುದ್ದಿ360 ದಾವಣಗೆರೆ, ಆ.02: ದೇವರು, ಹಬ್ಬ ಹಾಗೂ ಮೂಡನಂಬಿಕೆಗಳ ಹೆಸರಿನಲ್ಲಿ ಪೌಷ್ಠಿಕವಾದ ಹಾಲನ್ನು ವ್ಯರ್ಥ ಮಾಡದೆ, ಅವಶ್ಯಕತೆ ಇರುವ ಮಕ್ಕಳ, ರೋಗಿಗಳ, ಹಿರಿಯರ ಸೇವನೆಗೆ ನೀಡುವ ಮೂಲಕ ಮನುಷ್ಯರಲ್ಲಿ ದೇವರನ್ನು ಕಾಣಬೇಕು. ಮನುಷ್ಯರೇ ನಿಜವಾದ ದೇವರು ಎಂದು ವಿರಕ್ತಮಠದ ಬಸವಪ್ರಭುಶ್ರೀ ಹೇಳಿದರು. ಶ್ರೀಗಳು ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತಮಠದಲ್ಲಿ ಮಕ್ಕಳಿಗೆ ಹಾಲುಣಿಸುವುದರ ಮೂಲಕ ಹಾಲು ಕುಡಿಸುವ ಹಬ್ಬ, ಬಸವ ಪಂಚಮಿ ಆಚರಣೆಗೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ಪಂಚಮಿ ಹಬ್ಬ ಎಂದರೆ ಎಲ್ಲರೂ ನನ್ನ ಪಾಲು ಅಜ್ಜನ ಪಾಲು … Read more

ಹಾಲು ಕುಡಿಸುವ ಹಬ್ಬ

ಸುದ್ದಿ360, ದಾವಣಗೆರೆ ಆ. 01: ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಬಸವಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ಹಾಲು ಕುಡಿಸುವ ಹಬ್ಬವು ಮಂಗಳವಾರ (ಆಗಸ್ಟ್ 2) ದಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ವಿರಕ್ತಮಠದಲ್ಲಿ ಜರುಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯಶವಂತರಾವ್ ಜಾದವ್ ಭಾಗವಹಿಸಲಿದ್ದು, ಶ್ರೀ ಮಠದ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶಿವಯೋಗಿ ಸಿದ್ಧರಾಮೇಶ್ವರರ ಸಾಮಾಜಿಕ ಕ್ರಾಂತಿ ಇಂದಿಗೂ ಶಾಶ್ವತ: ಬಸವಪ್ರಭುಶ್ರೀ

ಸುದ್ದಿ360, ದಾವಣಗೆರೆ ಜು.30: 12 ನೇ ಶತಮಾನದಲ್ಲಿ ಶಿವಯೋಗಿ ಸಿದ್ದರಾಮೇಶ್ವರು ಅನುಷ್ಠಾನಗೊಳಿಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಶಾಶ್ವತವಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. ದಾವಣಗೆರೆಯ ವೆಂಕಾ ಭೋವಿ ಕಾಲೋನಿಯಲ್ಲಿರುವ ಶಿವಯೋಗಿ ಸಿದ್ದರಾಮೇಶ್ವರ ಸಂಸ್ಥಾನ ಮಠದಲ್ಲಿ ನಡೆದ 60 ನೇ ವರ್ಷದ ರಥೋತ್ಸವ ಅಂಗವಾಗಿ ಲಿಂ. ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಅಮೃತ ಶಿಲೆಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ  ಸಮ್ಮುಖ ವಹಿಸಿಕೊಂಡು ಮಾತನಾಡಿದರು. ಮಹಾಯೋಗಿಯಾದ ಶಿವಯೋಗಿ ಸಿದ್ದರಾಮರು ಬಳಿ ಬಂದವರಿಗೆ ಆಶೀರ್ವದಿಸಿ ಜನರನ್ನು ಉದ್ದರಿಸಿದ್ದಾರೆ. ಅಷ್ಟೇ ಅಲ್ಲದೇ ಕೆರೆಗಳನ್ನು … Read more

ದಿವ್ಯಪಥ ಲೋಕಹಿತ ಪ್ರವಚನ ಕಾರ್ಯಕ್ರಮ ಬಸವಪ್ರಭುಶ್ರೀಗಳಿಂದ ಚಾಲನೆ

ಸುದ್ದಿ360 ದಾವಣಗೆರೆ, ಜು.29: ಶ್ರವಣ ಎಂದರೆ ಕೇಳುವುದು . ಒಳ್ಳೆಯ ವಿಚಾರಗಳು ಕೇಳಿಸಿಕೊಳ್ಳಬೇಕು. ಮನದ ಮೈಲಿಗೆಯನ್ನು  ತೊಳೆಯಲು ಸುಜ್ಞಾನ ಬೇಕು. ಮಹಾತ್ಮರ , ಶರಣರ ನುಡಿಗಳೇ ಸುಜ್ಞಾನ . ಸುಜ್ಞಾನದಿಂದ ಬದುಕು ಶ್ರೇಷ್ಠವಾಗುತ್ತದೆ ಎಂದು ಬಸವಪ್ರಭುಶ್ರೀಗಳು ನುಡಿದರು. ಬಸವಪ್ರಭು ಸ್ವಾಮೀಜಿ , ಕುಮಾರಶಾಸ್ತ್ರೀ ಹಿರೇಮಠ , ಯಶವಂತರಾವ್ ಜಾದವ್ , ಲೋಕಿಕೆರೆ ನಾಗರಾಜ್ ದಿವ್ಯಪಥ ಲೋಕಹಿತ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು. ಅಥಣಿ ಶಿವಯೋಗಿಗಳ ಜೀವನ ದರ್ಶನ ಕುರಿತಾದ ಡಾ. ಮುರುಘಾ ಶರಣರು ರಚಿಸಿರುವ ‘ದಿವ್ಯಪಥ ಲೋಕಹಿತ’ 112 … Read more

ಮಂಗಳ ಗ್ರಹದ ಮೇಲೆ ವಸಹತು ಸ್ಥಾಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ!

ಬಾಹ್ಯಾಕಾಶ: ಮಕ್ಕಳ ಜ್ಞಾನದಾಹಕ್ಕೆ ನೀರೆರೆದ ಇಸ್ರೋ ಮಾಜಿ ಮುಖ್ಯಸ್ಥ ಕೆ.ಎಸ್. ಕಿರಣ್ ಕುಮಾರ್ ಸುದ್ದಿ360, ದಾವಣಗೆರೆ, ಜು.15: ಪ್ರಸಕ್ತ ಬಾಹ್ಯಾಕಾಶ ವಲಯದಲ್ಲಿ ಭಾರತ 5 ಇಲ್ಲವೇ ಆರನೇ ಸ್ಥಾನದಲ್ಲಿದೆ. ಭಾರತ ಬಾಹ್ಯಾಕಾಶ ವಲಯದಲ್ಲಿ ಮೊದಲ ಸ್ಥಾನಕ್ಕೆ ಬಂದರೆ ಮಂಗಳನ ಮೇಲೆ ನೆಲೆ ಕಾಣುವಂತಹ ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ಈಗಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ.ಎಸ್. ಕಿರಣ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಲಿಂ. ಶ್ರೀ … Read more

error: Content is protected !!