ಮಕ್ಕಳ ರಜೆಯ ಮೋಜಿಗೆ ಬೀದಿ ನಾಯಿಗಳ ಅಡ್ಡಿ – ದಾವಣಗೆರೆ ಮಹಾನಾಗರ ಪಾಲಿಕೆ ಮಕ್ಕಳ ರಜೆಗೆ ರಂಗು ನೀಡಬಹುದೆ?

-ಕೂಡ್ಲಿ ಸೋಮಶೇಖರ್ ಬೇಸಿಗೆ ರಜೆ ಬಂತೆಂದರೆ ಮಕ್ಕಳ ಆಟೋಪಾಟಕ್ಕೆ ಎಣೆಯುಂಟೆ? ಶಾಲಾ ದಿನಗಳಲ್ಲೇ ಅವರನ್ನು ನಿಯಂತ್ರಿಸಲು ಹರಸಾಹಸ ಪಡುವ ಪೋಷಕರು ರಜಾದಿನಗಳಲ್ಲಿ ಅವರನ್ನು ಸಂಬಾಳಿಸುವುದು ಹೇಗಪ್ಪಾ ಅನ್ನೋ ಪೇಚಿಗೆ ಸಿಲುಕುವುದು ಸರ್ವೆ ಸಾಮಾನ್ಯ. ಹೇಗೋ ಮನೆಯಾಚೆ ಸ್ನೇಹಿತರೊಡಗೂಡಿ ಆಟವಾಡಿಕೊಂಡು ಬರಲಿ ಎಂದು ಮನೆಯಾಚೆ ಕಳಿಸಿದರೆ ನಾಯಿಗಳ ಹಿಂಡೇ ಮಕ್ಕಳ ಮೇಲೆ  ಎರಗುವ ಪ್ರಕರಣಗಳು ನಗರದ ಕೆಲವೆಡೆ ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಲೇ ಇದೆ. ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನಲ್ಲಿಯೂ ಕೂಡ ಇಂತಹ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಪೋಷಕರು … Read more

ಮಹಾನಗರ ಪಾಲಿಕೆ ಆಡಳಿತ ವೈಫಲ್ಯ : ಸೂಪರ್‍ ಸೀಡ್‍ಗೆ ಪ್ರತಿಪಕ್ಷ ಕಾಂಗ್ರೆಸ್‍ ಒತ್ತಾಯ

ಸುದ್ದಿ360 ದಾವಣಗೆರೆ, ಜೂ.20:  ಮಹಾನಗರ ಪಾಲಿಕೆಯ ನೂತನ ಮೇಯರ್ ಅಧಿಕಾರ ವಹಿಸಿಕೊಂಡು 4 ತಿಂಗಳು ಕಳೆದರೂ ಇದುವರೆಗೂ ಸಾಮಾನ್ಯ ಸಭೆ ನಡೆಸಿಲ್ಲ. ವಾರ್ಡ್‍ಗಳ ಸಮಸ್ಯೆಗಳ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ. ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ ಅಲ್ಲದೆ, ಟೆಂಡರ್ ಕರೆಯಲು ಕೂಡ ಪಾಲಿಕೆ ಬಳಿ ಹಣವಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಮಹಾನಗರ ಪಾಲಿಕೆಗಳಲ್ಲಿ … Read more

ಗಾಜಿನ ಮನೆಗೆ ದಾರಿ ಕಾಣದೆ ಪರದಾಟ

ಸುದ್ದಿ360 ದಾವಣಗೆರೆ: ದೇವನಗರಿ ದಾವಣಗೆರೆಗೆ ಬರುವ ಪ್ರವಾಸಿಗರು ಗ್ಲಾಸ್ ಹೌಸ್ ನೋಡದಿದ್ದರೆ ಪ್ರವಾಸ ಪೂರ್ಣವಾಗುವುದಿಲ್ಲ. ಅಂತೆಯೇ ಇಲ್ಲಿ ಯಾರಿಗಾದರೂ ವಾಯುವಿಹಾರ ಮತ್ತು ಮನಸ್ಸಿಗೆ ಮುದ ನೀಡುವ ಜಾಗ ಹೇಳಿ ಎಂದರೆ ಥಟ್ ಅಂತ ಬರುವ ಮೊದಲ ಉತ್ತರ ಗ್ಲಾಸ್ ಹೌಸ್. ಹೀಗಿದ್ದರೂ ಗಾಜಿನ ಮನೆ ಸಂಪರ್ಕಿಸುವ ರಸ್ತೆ ಕಾಮಗಾರಿಯಿಂದಾಗಿ ಪ್ರವಾಸಿಗರಿಂದ ದೂರ ಸರಿದಿದೆ. ಗಾಜಿನ ಮನೆಗೆಂದು ಆಗಮಿಸುವ ಪ್ರವಾಸಿಗರು ನೋಡು ಗಾಜಿನ ಮನೆ ಕಾಣಿಸುತ್ತಿದೆ. ಇನ್ನೇನು ಬಂದೇಬಿಟ್ಟೆವು ಎಂದು ಖುಷಿಯಾಗುತ್ತಿದ್ದಂತೆ ಅಗೆದು ಹಾಕಿರುವ ರಸ್ತೆ ದುತ್ತೆಂದು ಎದುರಾಗುತ್ತದೆ. … Read more

error: Content is protected !!